Advertisement

Kapu ಮೂಳೂರು: ಲಾರಿಯಿಂದ ಬಿದ್ದು ಗಾಯ

11:42 PM Jun 16, 2024 | Team Udayavani |

ಕಾಪು: ಚಾಲಕನ ಅಜಾಗರೂಕತೆಯ ಚಾಲನೆಯಿಂದ ಸಹಾಯಕ ಲಾರಿಯಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಶನಿವಾರ ಮೂಳೂರಿನಲ್ಲಿ ನಡೆದಿದೆ.

Advertisement

ಕಂಪೆನಿಯೊಂದರ ಲಾರಿಯನ್ನು ಚಾಲಕ ಮೂಳೂರು ಮಿರ್ಚಿ ಹೊಟೇಲ್‌ ಬಳಿ ನಿಲ್ಲಿಸಿ ಅಂಗಡಿಗೆ ತೆರಳಿದ್ದು, ಅಲ್ಲಿಂದ ವಾಪಸ್‌ ಬಂದು ನೋಡಿದಾಗ ಲಾರಿಯ ಟರ್ಪಾಲು ಜಾರಿದ್ದು ಅದನ್ನು ಸರಿ ಮಾಡುವಂತೆ ಚಾಲಕ ರವಿ ಹೊಸಪೇಟೆ ಅವರು ಅವಿನಾಶ್‌ ಮತ್ತು ಚೇತನ್‌ ಅವರಿಗೆ ತಿಳಿಸಿದ್ದರು.

ಅದರಂತೆ ಅವಿನಾಶ್‌ ಲಾರಿಯ ಮೇಲೆ ಹೋಗಿದ್ದು ಅದೇ ಸಂದರ್ಭದಲ್ಲಿ ಚಾಲಕ ರವಿ ಲಾರಿಯನ್ನು ಚಲಾಯಿಸಿದ್ದರಿಂದ ಅವಿನಾಶ್‌ ಲಾರಿಯಿಂದ ಬಿದ್ದು ಗಾಯಗೊಂಡಿರು. ಲಾರಿಯಿಂದ ಬಿದ್ದು ಪ್ರಜ್ಞೆ ತಪ್ಪಿದ್ದ ಆತನನ್ನು ಲಾರಿ ಚಾಲಕ ಮತ್ತು ಇನ್ನೋರ್ವ ಜತೆ ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next