Advertisement

Kapu ಮಹಿಳೆಯ ಚಿನ್ನಾಭರಣ ಸೆಳೆದು ಪರಾರಿ

11:39 PM Oct 18, 2023 | Team Udayavani |

ಕಾಪು: ಬೈಕ್‌ನಲ್ಲಿ ಬಂದ ಕಳ್ಳನೋರ್ವ ದೇವಸ್ಥಾನದಲ್ಲಿ ಭಜನೆ ಮುಗಿಸಿ ವಾಪಸಾಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ 3.40 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಎಗರಿಸಿ ಪರಾರಿಯಾದ ಘಟನೆ ಅ. 17ರಂದು ಕಟಪಾಡಿಯಲ್ಲಿ ನಡೆದಿದೆ.

Advertisement

ಭವಾನಿ (57) ಕರಿಮಣಿ ಸರ ಮತ್ತು ಹವಳ ಸರವನ್ನು ಕಳೆದುಕೊಂಡಿರುವ ಮಹಿಳೆ. ಕಲ್ಲಾಪು ಕಡೆಗೆ ಬೇಬಿ ಅವರೊಂದಿಗೆ ನಡೆದುಕೊಂಡು ಬರುತ್ತಿದ್ದಾಗ ಕಟಪಾಡಿ ಒಳರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

ಬೈಕ್‌ ಸವಾರ ಚಿನ್ನಾಭರಣವನ್ನು ಎಳೆಯುವ ವೇಳೆ ಮಹಿಳೆ ಕೆಳಗೆ ಬಿದ್ದಿದ್ದು ಗಾಯಗೊಂಡಿದ್ದಾರೆ.

ಕರಿಮಣಿ ಮತ್ತು ಹವಳ ಸರದ ಒಟ್ಟು ಮೌಲ್ಯ 3.40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next