Advertisement

Kapu ಓವರ್‌ಟೇಕ್‌ ಮಾಡಿದ್ದಕ್ಕೆ ಹಲ್ಲೆ; ಓರ್ವ ಸೆರೆ

10:45 PM Sep 15, 2023 | Team Udayavani |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ಉಡುಪಿಯಿಂದ ಪಲಿಮಾರಿಗೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಕಾರು ಚಾಲಕ ಸಹಿತ ಕಾರಿನಲ್ಲಿದ್ದವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಓರ್ವನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

Advertisement

ಸುರತ್ಕಲ್‌ ಮೂಲದ ಇಮ್ರಾನ್‌ (30) ಬಂಧಿತ ಆರೋಪಿ. ಪಲಿಮಾರು ನಿವಾಸಿ ಗಣೇಶ ಪ್ರಸಾದ್‌ ಅವರು ತನ್ನ ಸ್ನೇಹಿತರಾದ ನಿತಿನ್‌ ಮತ್ತು ಜಿತೇಶ್‌ ಅವರೊಂದಿಗೆ ಕಾರಿನಲ್ಲಿ ಉಡುಪಿಗೆ ಹೋಗಿ ಕೆಲಸ ಮುಗಿಸಿ ರಾತ್ರಿ ವಾಪಸು ಪಲಿಮಾರಿಗೆ ತೆರಳುತ್ತಿದ್ದಾಗ ಕಾರಿಗೆ ಕೊಪ್ಪಲಂಗಡಿ ಬಳಿ ಮಾರುತಿ ಎರ್ಟಿಗಾ ಕಾರನ್ನು ಅಡ್ಡವಿಟ್ಟು 25-30 ವರ್ಷ ಪ್ರಾಯದ 4 ಮಂದಿ ಬೈದು ಹಲ್ಲೆ ನಡೆಸಿದ್ದರು. ಮಾತ್ರವಲ್ಲದೆ ಆರೋಪಿಗಳು ಕೈಯಿಂದ ಮತ್ತು ಅವರ ಕೈಯಲ್ಲಿದ್ದ ಆಯುಧಗಳಿಂದ ಕಾರಿಗೆ ಹೊಡೆದು ಕಾರನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ.

ಕಾಪು ಎಸ್ಸೆ ಅಬ್ದುಲ್‌ ಖಾದರ್‌ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯನ್ನು ಅ. 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಉಳಿದ ಆರೋಪಿಗಳು ಮತ್ತು ಕಾರಿಗಾಗಿ ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next