Advertisement

ಆಪ್‌ ನಾಯಕರ ರಷ್ಯಾ ಪ್ರವಾಸಕ್ಕೆ ಹಗರಣದ ಹಣ: ಮಿಶ್ರಾ ಇನ್ನೊಂದು ಬಾಂಬ್

03:43 PM May 21, 2017 | Team Udayavani |

ಹೊಸದಿಲ್ಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಭ್ರಷ್ಟಾಚಾರದ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಮಾಜಿ ಸಚಿವ ಕಪಿಲ್‌ ಮಿಶ್ರಾ ಭಾನುವಾರ ಇನ್ನೊಂದು ಬಾಂಬ್‌ ಸಿಡಿಸಿದ್ದಾರೆ.

Advertisement

ಸುದ್ದಿಗೋಷ್ಠಿ ಕರೆದು ಮಾತನಾಡಿದ ಮಿಶ್ರಾ  ಆಮ್ ಆದ್ಮಿ ಪಕ್ಷದ ನಾಯಕರಾದ ಆಶುತೋಷ್ ಹಾಗೂ ಸಂಜಯ್ ಸಿಂಗ್ ಅವರ ರಷ್ಯಾ ಪ್ರವಾಸಕ್ಕೆ ಹಣಕಾಸಿನ ನೆರವು ನೀಡಿದ್ದು ಹಲವು ಕಂಪೆನಿಗಳ ಭಾರೀ ಹಗರಣಗಳ ಆರೋಪಿ ಶೀತಲ್ ಪ್ರಸಾದ್ ಸಿಂಗ್ ಎಂದು ಹೇಳಿದ್ದಾರೆ.

ಸಂಜಯ್‌ ಸಿಂಗ್‌ ಮತ್ತು ಅಶುತೋಷ್‌ ಅವರು ಆಪನ್ನು ಹೈಜಾಕ್‌ ಮಾಡಿದ್ದಾರೆ ಎಂದು ಆರೋಪಿಸಿದರು. 

ಆಪ್‌ನಲ್ಲಿ 4 ರಿಂದ 5 ಮಂದಿ ಮಾತ್ರ ಭ್ರಷ್ಟರಿದ್ದಾರೆ ಅವರನ್ನು ತಕ್ಷಣ ಹೊರಹಾಕಬೇಕಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next