Advertisement

ಕಾಂತಮಂಗಲ ಸೇತುವೆ ಮೇಲ್ಪದರ ಅಗೆದು ದುರಸ್ತಿ

11:53 AM Sep 15, 2018 | Team Udayavani |

ಅಜ್ಜಾವರ: ಕಾಂತಮಂಗಲ ಸೇತುವೆ ದುರಸ್ತಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಜಿ.ಪಂ. ಎಂಜಿನಿಯರಿಂಗ್‌ ಇಲಾಖೆಯ ಮಾರ್ಗದರ್ಶನದಲ್ಲಿ ಸೇತುವೆಯ ಮೇಲ್ಪದರವನ್ನು ಪೂರ್ಣವಾಗಿ ಅಗೆದು ಹದಗೊಳಿಸುತ್ತಿದ್ದಾರೆ. ಒಂದು ತಿಂಗಳ ಕಾಲ ಈ ದುರಸ್ತಿ ಕಾಮಗಾರಿ ನಡೆಯಲಿದೆ. ಜನರ ಓಡಾಟ ಕಡಿಮೆಯಾಗದಿದ್ದರೂ ಕಾರ್ಮಿಕರು ಹೊಂದಿಕೊಂಡು ಕೆಲಸ ಮಾಡುತ್ತಿದ್ದಾರೆ. ಬದಲಿ ದಾರಿಯಿಲ್ಲದ ಕಾರಣ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

Advertisement

ಸೇತುವೆಯ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಎಂದಿನಂತೆ ರಸ್ತೆಯ ಇಕ್ಕೆಲಗಳಲ್ಲಿ ಬಸ್ಸು ಮತ್ತು ಆಟೋಗಳು ನಿಂತಿವೆ. ಎರಡು ಭಾಗದಿಂದಲೂ ಜನರನ್ನ ಕೊಂಡೊಯ್ಯುತ್ತಿವೆ. ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ಬೀನಾ ಕರುಣಾಕರ ಸ್ಥಳಕ್ಕೆ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next