Advertisement
15 ಲಕ್ಷ ರೂ. ಅಗತ್ಯಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ 10 ಲಕ್ಷ ರೂ. ಪ್ರಸ್ತಾವನೆಯಲ್ಲಿ 5 ಲಕ್ಷ ರೂ. ಬಿಡುಗಡೆಯಾಗಿದೆ. ಜಿ.ಪಂ. ಯೋಜನೆಯಡಿ 5 ಲಕ್ಷ ರೂ. ಮಂಜೂರಾತಿ ಹಂತದಲ್ಲಿದ್ದು, ಬಿಡುಗಡೆಗೊಳ್ಳಲು ಬಾಕಿ ಇದೆ. ಶಾಸಕರ ಮೂಲಕ 5 ಲಕ್ಷ ರೂ.ಗೆ ಬೇಡಿಕೆ ಇಡಲಾಗಿದೆ. ಒಟ್ಟು 15 ಲಕ್ಷ ರೂ. ಅನುದಾನದಲ್ಲಿ ಈಗ 5 ಲಕ್ಷ ರೂ. ಬಿಡುಗಡೆಯಾಗಿದ್ದು, ಉಳಿದ ಅನುದಾನ ಮಂಜೂರುಗೊಳ್ಳಬೇಕಷ್ಟೆ ಎಂದು ಜಿ.ಪಂ. ಎಂಜಿನಿಯರಿಂಗ್ ವಿಭಾಗ ಮಾಹಿತಿ ನೀಡಿದೆ.
ಸುಳ್ಯದಿಂದ ಕಾಂತಮಂಗಲ-ಅಜ್ಜಾವರ, ಮಂಡೆಕೋಲು ಮೂಲಕ ಕಾಸರಗೋಡು ಸಂಪರ್ಕಿಸುವ ಅಂತಾರಾಜ್ಯ ಸಂಪರ್ಕ ರಸ್ತೆ ಸೆ. 5ರಿಂದ ಅ. 5ರ ತನಕ ಬಂದ್ ಆಗಲಿದೆ. ಇಲ್ಲಿ ಘನ ಮತ್ತು ಲಘು ವಾಹನ ಓಡಾಟ ನಿರ್ಬಂಧಿಸಲಾಗುತ್ತದೆ.
Related Articles
ಕಾಂತಮಂಗಲ ಸೇತುವೆ ಮೂಲಕ ಸಂಚರಿಸುವ ವಾಹನಗಳಿಗೆ ನಾಲ್ಕು ಪರ್ಯಾಯ ರಸ್ತೆಯನ್ನು ಗುರುತಿಸಲಾಗಿದೆ. ಜಿ.ಪಂ. ಎಂಜಿನಿಯರಿಂಗ್ ವಿಭಾಗ ಈ ಕುರಿತು ಮಾಹಿತಿ ನೀಡಿದೆ. ದುರಸ್ತಿ ವೇಳೆಸಂಚರಿಸಲು ಬಳಸಬಹುದಾದ ರಸ್ತೆಗಳು ಈ ಕೆಳಗಿನಂತಿವೆ.
Advertisement
1. ಮಂಡೆಕೋಲು-ಮುರೂರು- ಜಾಲ್ಸೂರು-ಸುಳ್ಯ2. ಅಡ್ಪಂಗಾಯ – ಪೇರಾಲು- ಬೈತಡ್ಕ- ಸುಳ್ಯ
3. ಅಜ್ಜಾವರ-ಪೇರಾಲು-ಬೈತಡ್ಕ- ಸುಳ್ಯ
4. ಅಜ್ಜಾವರ-ನಾರ್ಕೋಡು- ಸುಳ್ಯ ಸಹಕಾರ ಅಗತ್ಯ
ಕಾಂತಮಂಗಲ ಸೇತುವೆ ದುರಸ್ತಿ ಸೆ. 5ರಿಂದ ಆರಂಭಗೊಳ್ಳುತ್ತದೆ. ಮುಂದಿನ ಒಂದು ತಿಂಗಳು ವಾಹನ ಸಂಚಾರ ಬಂದ್ ಮಾಡಲಾಗಿದೆ. ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರು ಆ ರಸ್ತೆ ಬಳಸಿಕೊಳ್ಳಬಹುದು. ದುರಸ್ತಿ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ.
– ಮಣಿಕಂಠ,
ಜಿ.ಪಂ. ಎಂಜಿನಿಯರ್