Advertisement

Mudalagi ಬಳಿ ಸೇತುವೆ ಮೇಲೆ ನದಿ ನೀರು ಹರಿದು ರಸ್ತೆ ಸಂಚಾರ ಸ್ಥಗಿತ!

08:54 PM Apr 05, 2024 | Team Udayavani |

ಬೆಳಗಾವಿ: ಎಲ್ಲಿಯೂ ಮಳೆ ಇಲ್ಲ. ನೀರಿಗಾಗಿ ಹಾಹಾಕಾರ ಇದೆ. ಹೀಗಿರುವಾಗ ಬೆಳಗಾವಿ ಜಿಲ್ಲೆಯ ಮೂಡಲಗಿ ಬಳಿ ಸೇತುವೆ ಮೇಲೆ ನದಿ ನೀರು ಹರಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Advertisement

ಅಚ್ಚರಿ ಪಡಬೇಡಿ. ಇಲ್ಲಿ ಮಳೆಯಾಗಿಲ್ಲ.ಬದಲಿಗೆ ಕುಡಿಯುವ ನೀರಿಗಾಗಿ ಜಲಾಶಯದಿಂದ ನದಿಗೆ ಬಿಟ್ಟ ನೀರಿನಿಂದ ಈ ಅವಾಂತರ ಆಗಿದೆ. ಹಿಡಕಲ್ ಜಲಾಶಯದಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜನರಿಗಾಗಿ ಕುಡಿಯುವ ನೀರಿನ ಉದ್ದೇಶದಿಂದ ಘಟಪ್ರಭಾ ನದಿಗೆ ನೀರು ಬಿಡಲಾಗಿದೆ.

ಬೇಸಿಗೆ ಹಿನ್ನಲೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರನ್ನು ಬೀಡುಗಡೆ ಮಾಡಲಾಗಿದೆ. ಇದರಿಂದ ಶುಕ್ರವಾರದಂದು ಮೂಡಲಗಿ ತಾಲೂಕಿನ ಸುಣಧೋಳಿ-ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸುಣಧೋಳಿ ಸೇತುವೆಯು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಸುಣಧೋಳಿಯ ಬಳಿಯ ಘಟಪ್ರಭಾ ನದಿಯ ಸೇತುವೆಗೆ ಗೇಟ್‌ಗಳನ್ನು ಹಾಕಿರುವುದರಿಂದ ಸೇತುವೆ ಮೇಲೆ ನೀರು ಹರಿದು ಬರುತ್ತಿದೆ. ಇದರಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಬಿ.ಎಸ್ ಖಡಕಬಾವಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next