Advertisement

ಸ್ವಯಂ ಘೋಷಿತ ದೇವ ಮಾನವ ಕರೌಲಿ ಬಾಬಾರ ಒಂದು ಹವನಕ್ಕೆ 1.51 ಲ – 2.51 ಲಕ್ಷ ರೂ.!

12:57 PM Mar 26, 2023 | Team Udayavani |

ಲಕ್ನೋ: ತನ್ನ ದೊಡ್ಡ ದೊಡ್ಡ ಹೇಳಿಕೆಗಳಿಂದ ಸುದ್ದಿಯಾಗಿರುವ ಉತ್ತರ ಪ್ರದೇಶದ ಕಾನ್ಪುರದ ಸ್ವಯಂ ಘೋಷಿತ ದೇವ ಮಾನವ ಕರೌಲಿ ಬಾಬಾ (ಸಂತೋಷ್ ಸಿಂಗ್ ಭಡೋರಿಯಾ – ನಿಜವಾದ ಹೆಸರು) ಹವನಗಳನ್ನು ಮಾಡಿಸಲು ನಿಗದಿಪಡಿಸಿರುವ ನೂತನ ಶುಲ್ಕಗಳು ಗಮನ ಸೆಳೆದಿದೆ.

Advertisement

ಇತ್ತೀಚೆಗಷ್ಟೇ ನೋಯ್ಡಾ ಮೂಲದ ವೈದ್ಯರೊಬ್ಬರು ಸ್ವಯಂ ಘೋಷಿತ ದೇವ ಮಾನವ ಕರೌಲಿ ಬಾಬಾ ವಿರುದ್ಧ ದೂರು ದಾಖಲಿಸಿದ್ದರು. ಬಾಬಾರ ಮಂತ್ರ ಪಠಣದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಕ್ಕೆ ಬಾಬಾರ ಬೆಂಬಲಿಗರು ನನಗೆ ಥಳಿಸಿದ್ದಾರೆ ಎಂದು ವೈದ್ಯ ಪೊಲೀಸ್‌ ಠಾಣೆಯಲ್ಲಿ ಕರೌಲಿ ಬಾಬಾನ ವಿರುದ್ಧ ದೂರು ದಾಖಲಿಸಿದ್ದರು.

ಇದಾದ ಬಳಿಕ ಕರೌಲಿ ಬಾಬಾ ಬೆಳಕಿಗೆ ಬಂದಿದ್ದರು. ರೋಗಗಳನ್ನು ಗುಣಪಡಿಸುವುದು, ದೊಡ್ಡ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಅವರ ಹವನ ಆಚರಣೆಗಳ ಮೂಲಕ ರಾಜಕೀಯ ವಿವಾದಗಳನ್ನು ಪರಿಹರಿಸುತ್ತೇನೆ ಎನ್ನುವ ಕರೌಲಿ ಬಾಬಾ ಇದೀಗ ತನ್ನ ಹವನದ ಶುಲ್ಕವನ್ನು ಬರೋಬ್ಬರಿ 1 ಲಕ್ಷ ರೂ. ಗೆ ಏರಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪುಕ್ಕಲುತನದಿಂದ ವರುಣಾಗೆ ಬರುತ್ತಿದ್ದಾರೆ: ಪ್ರತಾಪ್ ಸಿಂಹ

ಬಾಬಾರ ಆಶ್ರಮದಲ್ಲಿ ಹವನ ಮಾಡಿಸಲು ಹೋಗುವಾಗ 3,500 ರೂ.ವಿನ ಕಿಟ್‌ ನೀಡಲಾಗುತ್ತದೆ. ಸಮಸ್ಯೆಯ ಪರಿಹಾರಕ್ಕಾಗಿ 31,500 ರೂ.ಗಳಿಗೆ ಕನಿಷ್ಠ ಒಂಬತ್ತು ಹವನಗಳು ಬೇಕಾಗುತ್ತವೆ ಅದನ್ನು ಪಾವತಿಸುವ ಭಕ್ತರಿಗೆ ಆಶ್ರಮದಲ್ಲಿ ಊಟ ಹಾಗೂ ವಾಸ್ತವ್ಯದ ವ್ಯವಸ್ಥೆಯೂ ಇರುತ್ತದೆ.

Advertisement

ಇದೀಗ ಬಾಬಾ ಬೆಳಕಿಗೆ ಬಂದ ಮೇಲೆ ಒಂದು ದಿನದ ಹವನ ಮಾಡಿಸುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅತ್ಯಂತ ಬ್ಯುಸಿಯಾಗಿರುವ ಭಕ್ತರಿಗೆ ಹವನ ಶೀಘ್ರದಲ್ಲಿ ಮಾಡಿಸಬೇಕಾದರೆ 1.51 ಲಕ್ಷದಿಂದ 2.51 ಲಕ್ಷ ರೂ.ವನ್ನು ಪಾವತಿಸಬೇಕು. ಈ ಹವನ ಕ್ರಮ ಏ. 1ರಿಂದ ಜಾರಿಗೆ ಬರಲಿದೆ ಎಂದು ಬಾಬಾ ಸಹಾಯಕ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಅವಧಿಯಲ್ಲಿ ಕೆಲಸ ಮಾಡಿದ್ದ ಯುಪಿಯ ಮಾಜಿ ಡಿಜಿಪಿ ನನ್ನ ಮೇಲೆ ಕೇಳಿ ಬಂದ ಎಲ್ಲಾ ಆರೋಪಗಳ ಹಿಂದೆ ಇದ್ದಾರೆ. ಅವರೇ ನನ್ನ ಆಶ್ರಮಕ್ಕೆ ವೈದ್ಯನನ್ನು ಕಳುಹಿಸಿ ನನ್ನ ಮೇಲೆ ಎಫ್‌ ಐಆರ್‌ ದಾಖಲಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಬಾಬಾ ಹೇಳಿದ್ದಾರೆ.

ಭಾರತ – ಪಾಕಿಸ್ತಾನ ನಡುವೆ ಇರುವ ಸಮಸ್ಯೆಯನ್ನು ರಾಜಕೀಯ ಪಕ್ಷಗಳು ಬಂದು ಕೇಳಿದರೆ ನಾನು ಪರಿಹರಿಸುತ್ತೇನೆ ಎಂದು ಹೇಳುವ ಬಾಬಾ, ಕೋವಿಡ್‌ ಸಂದರ್ಭದಲ್ಲಿ ನನ್ನ ಯಾವ ಭಕ್ತರೂ ಮೃತಪಟ್ಟಿಲ್ಲ ಎನ್ನುವುದನ್ನೂ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next