Advertisement

ಕನ್ನಡ ವೆಲ್ಫೇರ್‌ ಸೊಸೈಟಿ : ನೂತನ ಕಾರ್ಯಕಾರಿ ಸಮಿತಿ 

03:25 PM Dec 06, 2017 | Team Udayavani |

ಮುಂಬಯಿ: ಕನ್ನಡ ವೆಲ್ಫೇರ್‌ ಸೊಸೈಟಿ ಘಾಟ್‌ಕೋಪರ್‌ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಸ್ಥೆಯ ಮಹೇಶ್‌ ಶೆಟ್ಟಿ (ಬಾಬಾಸ್‌ ಗ್ರೂಪ್‌) ಅಡಿಟೋರಿಯಂನಲ್ಲಿ ಜರಗಿತು. ಅನಂತರ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ 2017-19ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

Advertisement

ಸಂಸ್ಥೆಯು ಈಗಾಗಲೇ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮಹೇಶ್‌ ಎಸ್‌. ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸರ್ವಾನುಮತದಿಂದ ನೇಮಿಸಲಾಯಿತು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ನವೀನ್‌ ಶೆಟ್ಟಿ ಇನ್ನಾಬಾಳಿಕೆ ಅವರನ್ನು ಅವಿರೋಧವಾಗಿ ಮರು ನೇಮಿಸಲಾಯಿತು.
ಉಪಾಧ್ಯಕ್ಷರಾಗಿ ಜಯರಾಜ್‌ ಜೈನ್‌, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ ಎಲ್ಲೂರು, ಗೌರವ ಕೋಶಾಧಿಕಾರಿಯಾಗಿ ಹರೀಶ್‌ ಎಂ. ಶೆಟ್ಟಿ ಅವರನ್ನು ಆಯ್ಕೆಮಾಡಲಾಯಿತು. ಜತೆ ಕಾರ್ಯದರ್ಶಿಯಾಗಿ ರಮಾನಂದ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಪೀಟರ್‌ ರೋಡ್ರಿಗಸ್‌ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶಾಂತಾ ಎನ್‌. ಶೆಟ್ಟಿ ಅವನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾರಾಯಣ ಶೆಟ್ಟಿ ನಂದಳಿಕೆ, ರಾಧಾಕೃಷ್ಣ ಶೆಟ್ಟಿ, ತಿಮ್ಮ ದೇವಾಡಿಗ, ಎಸ್‌. ಎ. ಮೆಂಡನ್‌, ಸುರೇಶ್‌ ಶೆಟ್ಟಿ, ರಘುನಾಥ ಶೆಟ್ಟಿ, ಜಯಂತಿ ಮೊಲಿ, ಸುರೇಶ್‌ ರೇವಣRರ್‌, ವಿದ್ಯಾ ಶೇಟ್‌, ಎಲ್‌. ಎ. ಪೂಜಾರಿ, ಸುಭಾಷ್‌ ಶಿರಿಯಾ, ಚಂದ್ರಶೇಖರ್‌ ಶೆಟ್ಟಿ ಅವರು ಆಯ್ಕೆಯಾದರು. ಕೋ ಆಪ್ಟ್ ಸದಸ್ಯರಾಗಿ ಪ್ರಕಾಶ್‌ ಎಂ. ಶೆಟ್ಟಿ ಸುರತ್ಕಲ್‌ ಮತ್ತು ರವೀಂದ್ರ ಅಮೀನ್‌, ಸಲಹೆಗಾರರಾಗಿ ಅಶೋಕ್‌ ಪಕ್ಕಳ, ಜಯ ಎ. ಶೆಟ್ಟಿ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಪ್ರಭಾಕರ ಬೋಳಾರ್‌, ಎಚ್‌. ಕೆ. ಸುಧಾಕರ ಅರಾಟೆ ಅವರನ್ನು ನೇಮಿಸಲಾಯಿತು.
 

Advertisement

Udayavani is now on Telegram. Click here to join our channel and stay updated with the latest news.

Next