Advertisement

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

10:22 AM Feb 12, 2021 | Team Udayavani |

ಮಂಗಳೂರು: ಮೂರು ದಿನಗಳ ಕಾಲ ನಡೆಯುವ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ‌ ಅಂಗವಾಗಿ ಧ್ವಜಾರೋಹಣ ನಗರದ ಕೋಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.

Advertisement

ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ ಮಾತನಾಡಿ, ಕನ್ನಡ ನಾಡು, ನುಡಿ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ:ಕಡಬ ತಾಲೂಕಿನ ರೆಂಜಿಲಾಡಿ: ತೋಟದಲ್ಲಿ ಚಿರತೆ ದಾಳಿ, ಇಬ್ಬರು ಆಸ್ಪತ್ರೆಗೆ ದಾಖಲು

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಶಾರದಾ ಸಮೂಹ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ. ಪುರಾಣಿಕ್ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು.

ಇದೇ ವೇಳೆ ಸಮ್ಮೇಳನದ ಅಧ್ಯಕ್ಷ, ಹಿರಿಯ ಸಾಹಿತಿ ಪ್ರಭಾಕರ ಜೋಷಿ, ಭಾರತ ಸೇವಾದಳ ಮಂಜೇಗೌಡ, ಮನಪಾ ಸದಸ್ಯೆ ಜಯಶ್ರೀ ಕುಡ್ವ ಶಿಕ್ಷಕರಾದ ಶಿವಕುಮಾರ್, ರಾಘವೇಂದ್ರ ರಾವ್ ಸೇರಿದಂತೆ ಮತ್ತಿತರರು ಇದ್ದರು‌.

Advertisement

ಇದನ್ನೂ ಓದಿ:ಪೇಜಾವರ-ಸಿದ್ಧಗಂಗಾ ಶ್ರೀ ನೆನಪಿಗೆ ಸ್ಮೃತಿ ವನ : ಬಜೆಟ್‌ನಲ್ಲಿ ಘೋಷಣೆಗೆ ಶಿಫಾರಸು

Advertisement

Udayavani is now on Telegram. Click here to join our channel and stay updated with the latest news.

Next