Advertisement

ಕಸಾಪ ಸಮಸ್ತ ಕನ್ನಡಿಗರ ಶಕ್ತಿಯಾಗಿಸಲು ಸಂಕಲ್ಪ

02:01 PM Apr 07, 2021 | Team Udayavani |

ಕೋಲಾರ: ಕನ್ನಡ ಸಾಹಿತ್ಯ ಪರಿಷತ್ತನ್ನು ಸಮಸ್ತಕನ್ನಡಿಗರ ಶಕ್ತಿ ಕೇಂದ್ರವಾಗಿಸುವ ಮೂಲಕನಾಡು-ನುಡಿಯ ಸರ್ವತೋಮುಖ ಬೆಳವಣಿಗೆಗೆಕೆಲಸ ಮಾಡುವುದಾಗಿ ಕನ್ನಡ ಸಾಹಿತ್ಯ ಪರಿಷತ್‌ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಮಾಯಣ್ಣ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 9ರಂದುಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ತಮಗೆ ಅವಕಾಶ ಸಿಕ್ಕಲ್ಲಿ ಕಸಾಪದ ಅರ್ಥಿಕ ಸದೃಢಪಡೆಸಿ, ಕನ್ನಡ ಪರ ಯೋಜನೆಗಳನ್ನುಅನುಷ್ಠಾನಕ್ಕೆ ತರುವ ಮೂಲಕ ಸಮಸ್ತಕರ್ನಾಟಕವನ್ನು ಕನ್ನಡಮಯವಾಗಿ ರೂಪಿಸಬೇಕೆಂಬ ಕನಸು ಹೊಂದಿರುವುದಾಗಿ ತಿಳಿಸಿದರು.

ಬೆಂಗಳೂರು ನಗರ ಘಟಕದ ಅಧ್ಯಕ್ಷನಾಗಿಕನ್ನಡವೇ ದೈವ- ಕನ್ನಡ ಸೇವೆಯೇ ಜೀವ ಎಂಬಘೋಷಣೆಯಡಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದೇನೆ.ಹಲವು ಸಂಘಟನೆಗಳಲ್ಲಿ ಗುರುತಿಸಿ ಕೊಂಡಿದ್ದೇನೆ.ಸಮಾನ ಮನಸ್ಕರ ಒಕ್ಕೂಟ, ಸಹಕಾರ ಸಂಘ,ಕಾರ್ಮಿಕ ಕನ್ನಡ ಸಂಘಗಳು, ಕನ್ನಡ ಜನಶಕ್ತಿ ಸಂಘ,ಬಿಬಿಎಂಪಿ ನೌಕರರ ಕನ್ನಡ ಸಂಘ ಸೇರಿದಂತೆ ಹಲವುಸಂಘಟನೆಗಳ ಒತ್ತಾಯದ ಮೇರೆಗೆ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿದ್ದೇನೆ ಎಂದರು.

ಪ್ರತ್ಯೇಕ ಶಾಶ್ವತ ನಿಧಿ ಸ್ಥಾಪನೆ ಅಗತ್ಯ: ಆರೂವರೆಕೋಟಿ ಜನಸಂಖ್ಯೆಯುಳ್ಳ ಕರ್ನಾಟಕದಲ್ಲಿ ಕೇವಲಮೂರೂಕಾಲು ಲಕ್ಷ ಸದಸ್ಯರನ್ನೊಳಗೊಂಡಿರುವುದನ್ನು ವಿಸ್ತರಿಸುವುದು ಅವಶ್ಯಕವಾಗಿದೆ.ಅಖೀಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳಧನಸಹಾಯಕ್ಕೆ ಸರ್ಕಾರದತ್ತ ಮುಖ ಮಾಡುವುದನ್ನು ಬಿಟ್ಟು ಅರ್ಥಿಕವಾಗಿಸಮೃದ್ದಗೊಳಿಸಲು ಪರಿಷತ್ತಿಗೆ ಪ್ರತ್ಯೇಕ ಶಾಶ್ವತನಿಧಿಯನ್ನು ಸ್ಥಾಪಿಸ ಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಕಸಾಪದ ಮುದ್ರಣಾಲಯವನ್ನು ಅಧುನೀಕರಿಸಿ ಹೊರ ಮುದ್ರಣಕ್ಕೂ ಅಣಿಗೊಳಿಸಬೇಕಾಗಿದೆ. ಕಸಾಪವನ್ನು ಸರ್ವಶಕ್ತಗೊಳಿಸುವ ದಿಸೆಯಲ್ಲಿ ನಾಡಿನಚಿಂತಕರು, ತಜ್ಞರು ಸಮಾಲೋಚಿಸಿ ಹಲವು ಕ್ರಿಯಾಯೋಜನೆಗಳನ್ನು ರೂಪಿಸಿದ್ದು, ಈ ಮಹಾಕನಸಿನಯೋಜನೆಗಳ ಹಾದಿಯತ್ತ ಹೆಜ್ಜೆಗಳನ್ನು ಹಾಕಿದ್ದೇನೆ ಎಂದರು.

Advertisement

ಸಾಹಿತ್ಯದ ಕೃತಿಗಳಿಗೆ ತಲಾ 10 ಸಾವಿರರೂಪ್ರೋತ್ಸಾಹ ಧನ, ಕಸಾಪ ಸದಸ್ಯರಿಗೆಡಿಜಿಟಲೀಕರಣದ ಸ್ವಾರ್ಟ್‌ ಕಾರ್ಡ್‌ ಗುರುತಿನಚೀಟಿ ವಿತರಣೆ, ರಾಜ್ಯದ ಎಲ್ಲಾ ಜಿಲ್ಲಾ ಮತ್ತುತಾಲ್ಲೂಕು ಕೇಂದ್ರಗಳಲ್ಲಿ ಕಸಾಪ ಭವನಗಳ ನಿರ್ಮಾಣಕ್ಕೆ ಅದ್ಯತೆ ತಮ್ಮ ಗುರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತುಚುನಾವಣೆಗೆ ಸಂಬಂ ಧಿಸಿದಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ವಚನಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ತ್ಯಾಗರಾಜ್‌,ಉಪಾಧ್ಯಕ್ಷ ರೋಣೂರು ಆರ್‌.ಬಿ. ವೆಂಕಟೇಶ್‌,ಉಪನ್ಯಾಕ ಕಾಳಪ್ಪ, ವಚನ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ.ನಾ.ಮುನಿರಾಜು. ತಾಲ್ಲೂಕು ಅಧ್ಯಕ್ಷ ನಾರಾಯಣಪ್ಪ ಹಾಗೂ ರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next