Advertisement
ಪರಿಷತ್ತಿನ ಚುನಾವಣೆಯಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯುತ್ತಿದ್ದೀರಿ ಹೇಗೆ ಏನು ಅನಿಸುತ್ತೆ?
Related Articles
Advertisement
ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಲು ಮಹಿಳೆಗೆ 105 ವರ್ಷ ಬೇಕಾಯ್ತು? :
ನಿಜ, ಇದು ದುಃಖದ ವಿಚಾರವಾಗಿದೆ. ಸೋಲೋ ಗೆಲುವೋ ಮೊದಲು ಮಹಿಳೆಯರು ಯುದ್ಧ ಕಣದಲ್ಲಿ ಇಳಿಯುವುದನ್ನು ಕಲಿಯಬೇಕು.ಆ ನಂತರ ಫಲಿತಾಂಶ ನಿರೀಕ್ಷಿಸಬೇಕು.
ಕಲ್ಯಾಣ ಕರ್ನಾಟಕದವರು ಈ ಬಾರಿ ಅಧಿಕ ಸಂಖ್ಯೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ? :
ಈ ಹಿಂದೆ ಅಧಿಕಾರ ನಡೆಸಿದವರು ಬೆಂಗಳೂರು, ಮೈಸೂ ರಿನ ಕಡೆಯವರು ಆಗಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕಕ್ಕೆ ಅವಕಾಶ ಸಿಗಲಿ ಎಂಬ ಕಾರಣಕ್ಕಾಗಿಯೇ ದೊಡ್ಡ ಸಂಖ್ಯೆಯಲ್ಲಿ ಅಖಾಡಕ್ಕಿಳಿದಿದ್ದಾರೆ.
ಕಲ್ಯಾಣ ಕರ್ನಾಟಕದ ಮತ ಚದುರಿಸಲು ಚಿಮ್ಮುಲಗಿ ಅವರು ಚುನಾವಣ ಅಖಾಡಕ್ಕೆ ಇಳಿಸಲಾಗಿದೆ ಎಂಬ ಆರೋಪ ಇದೆ. :
ಹೇಳುವರರು ನೂರು ಹೇಳಲಿ. ಟೀಕೆಗಳು ನನ್ನ ಎತ್ತರಕ್ಕೆ ಬೆಳಸಿವೆ. ನಾನು ಅಖಾಡಕ್ಕೆ ಇಳಿದಿರುವುದು ಕೆಲವರನ್ನು ಎದೆಗುಂದಿಸಿದೆ. ಹೀಗಾಗಿ ಆರೋಪ ಮಾಡುತ್ತಿದ್ದಾರೆ. ನಾನುಯಾರಿಗೂ ಹೆದರುವುದಿಲ್ಲ. ಯಾರ ಮತ ಚದುರಿಸಲುಅಖಾಡಕ್ಕೆ ಇಳಿದಿದ್ದಲ್ಲ.
ಸರಸ್ವತಿ ಚಿಮ್ಮಲಗಿ ಅವರು ವಿಜಯಶಾಲಿ ಆದರೆ ಏನ್ ಮಾಡುತ್ತೀರಿ? :
ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲ ಹಂತದಲ್ಲಿ ಮಹಿಳೆಯರಿಗೆ ಸಮಾನ ಆದ್ಯತೆ ನೀಡುತ್ತೇನೆ. ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುತ್ತೇನೆ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಜತೆಗೆ ದಲಿತ ವಿಶೇಷ ಸಾಹಿತ್ಯ ಸಮ್ಮೇಳ ಆಯೋಜಿಸುತ್ತೇನೆ.
–ದೇವೇಶ ಸೂರಗುಪ್ಪ