Advertisement

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

09:09 PM Apr 23, 2024 | Team Udayavani |

ತಿರುವನಂತಪುರಂ: ಚುನಾವಣೆ ಪ್ರಚಾರದ ವೇಳೆ ವಿಪಕ್ಷಗಳಿಂದ ತನ್ನ ಮೇಲೆ ದಾಳಿ ನಡೆದಿದೆ ಎಂದು ಹೇಳಿಕೊಂಡಿದ್ದ ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಕೃಷ್ಣಕುಮಾರ್‌ ಈಗ ಪೇಚಿಗೆ ಸಿಲುಕಿದ್ದಾರೆ. ಅವರ ವಿರುದ್ಧ ದಾಳಿ ನಡೆಸಿದ್ದು ವಿಪಕ್ಷಗಳಲ್ಲ, ಸ್ವಪಕ್ಷದ ಸ್ಥಳೀಯ ನಾಯಕ ಎಂಬುದು ಬಹಿರಂಗಗೊಂಡಿದೆ.

Advertisement

ಏ.22ರಂದು ಕೊಲ್ಲಂ ಕುಂದ್ರಾದಲ್ಲಿ ಚುನಾವಣೆ ರ್ಯಾಲಿ ನಡೆಸುತ್ತಿದ್ದಾಗ ಕೃಷ್ಣ ಕುಮಾರ್‌ ಅವರ ಮೇಲೆ ಸ್ಕೂಟರ್‌ ಕೀ ಎಸೆದು ಹಲ್ಲೆ ಮಾಡಲಾಗಿತ್ತು. ಇದರಿಂದ ಅವರ ಕಣ್ಣಿಗೆ ಗಾಯವೂ ಆಗಿತ್ತು. ಈ ಸಂಬಂಧ ದೂರು ದಾಖಲಿಸಿದ್ದ ಅವರು, ವಿಪಕ್ಷಗಳು ತನ್ನ ವಿರುದ್ಧ ಈ ರೀತಿ ಪಿತೂರಿ ರೂಪಿಸಿವೆ ಎಂದೂ ಆರೋಪಿಸಿದ್ದರು.

ಆದರೀಗ ಪೊಲೀಸರು ತನಿಖೆಯಲ್ಲಿ ಕೊಲ್ಲಂನ ಸ್ಥಳೀಯ ಬಿಜೆಪಿ ನಾಯಕ ಸನಾಲ್‌ ಪುಥನ್ವಿಲಾ ಎಂಬವರು ಕೀ ಎಸೆದು ಹಲ್ಲೆ ನಡೆಸಿದ್ದರೆಂದು ತಿಳಿದುಬಂದಿದೆ.ಅವರನ್ನು ಸೋಮವಾರ ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next