Advertisement

ಕಣವಿಗೆ ಕನ್ನಡ ರತ್ನ ಪ್ರಶಸ್ತಿ

10:48 AM Jul 22, 2018 | Team Udayavani |

ಬೆಂಗಳೂರು: ದುಬೈನಲ್ಲಿರುವ ಕನ್ನಡ ಸಂಘಟನೆ ಕೊಡಮಾಡುವ ಕನ್ನಡ ರತ್ನ ಪ್ರಶಸ್ತಿಗೆ ನಾಡಿನ ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಭಾಜನರಾಗಿದ್ದಾರೆ. “ಕನ್ನಡಿಗರು ದುಬೈ’ ಎಂಬ ಸಂಘಟನೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಡಿನ ಹಿರಿಯ ಚೇತನಗಳಿಗೆ ಪ್ರತಿ ವರ್ಷ ದುಬೈನಿಂದ ಆಗಮಿಸಿ ರಾಜ್ಯದಲ್ಲಿಯೇ ಪ್ರಶಸ್ತಿ ಕೊಡುವ ವಿಶಿಷ್ಟ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದು, ಈ ವರ್ಷ ಕವಿ ಚನ್ನವೀರ ಕಣವಿಯವರಿಗೆ ಪ್ರಶಸ್ತಿ ನೀಡಲು ಸಂಘಟನೆ ನಿರ್ಧರಿಸಿದೆ. ಕಣವಿ ಅವರಿಗೆ ಧಾರವಾಡದಲ್ಲಿಯೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆ.3 ರಂದು ಶುಕ್ರವಾರ ಸಂಜೆ 6 ಗಂಟೆಗೆ ಧಾರವಾಡದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

Advertisement

ಕಾರ್ಯಕ್ರಮ ಪ್ರಯುಕ್ತ ಧಾರವಾಡ ಜಿಲ್ಲೆಯ ದೇವರ ಹುಬ್ಬಳ್ಳಿಯ ರಂಗ ಗಂಗಾ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ನಂತರ ರಂಗಗಂಗಾ ಕಲಾವಿದರಿಂದ ಸಹಿಪ್ರಾಶ 1990 ಎಂಬ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next