Advertisement

Kannada Movies; ರಾಜ್ಯದಲ್ಲಿ ಚಿತ್ರಮಂದಿರ ಸ್ಥಗಿತ ಇಲ್ಲ : ಮಂಡಳಿ

12:10 AM May 24, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಚಿತ್ರಮಂದಿರಗಳನ್ನು ಬಂದ್‌ ಮಾಡುವ ಯೋಚನೆ ನಮ್ಮ ಮುಂದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.

Advertisement

ಸದ್ಯ ಕನ್ನಡ ಚಿತ್ರರಂಗದಲ್ಲಿ ಸಿನೆಮಾ ಗಳ ಹಾಗೂ ಪ್ರೇಕ್ಷಕರ ಕೊರತೆಯಿಂದ ಚಿತ್ರಮಂದಿರಗಳು ಸಂಕಷ್ಟಕ್ಕೆ ಒಳಗಾ
ಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ತೆಲಂಗಾಣ ರೀತಿ ಚಿತ್ರಮಂದಿರಗಳನ್ನು ತಾತ್ಕಾಲಿಕ ಸ್ಥಗಿತ ಮಾಡಬೇಕಾಗ
ಬಹುದು ಎಂಬ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮಂಡಳಿ ಕನ್ನಡ ಚಿತ್ರರಂಗದ ನಿರ್ಮಾಪಕರು ಹಾಗೂ ಇತರ ಪ್ರಮುಖರ ಸಭೆ ನಡೆಸಿದೆ. ಸಭೆಯಲ್ಲಿ ಚಿತ್ರ ಮಂದಿರಗಳನ್ನು ಬಂದ್‌ ಮಾಡುವ ಬದಲು ಬೇರೆ ಮಾರ್ಗಗಳ ಮೂಲಕ ಪ್ರದರ್ಶಕರನ್ನು ಸಂಕಷ್ಟದಿಂದ ಪಾರು ಮಾಡುವ ಬಗ್ಗೆ ಚರ್ಚಿಸಲಾಯಿತು.

ಸಭೆ ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಎನ್‌.ಎಂ. ಸುರೇಶ್‌, “ನಮ್ಮ ಮುಂದೆ ಚಿತ್ರ ಮಂದಿರಗಳನ್ನು ಬಂದ್‌ ಮಾಡುವ ಮಾಡುವ ಯೋಚನೆ ಇಲ್ಲ. ಆದರೆ ಬಂದ್‌ ಬಗ್ಗೆ ಜೋರಾಗಿ ಸುದ್ದಿ ಹಬ್ಬಿದ್ದರಿಂದ ಸಿನೆಮಾ ಮಂದಿಯಲ್ಲಿ ಗೊಂದಲ ಆರಂಭವಾಗಿದೆ. ಇದು ಸಿನೆಮಾ ಉದ್ಯಮಕ್ಕೆ ತೊಂದರೆ ಆಗುತ್ತಿದೆ. ಬಂದ್‌ ಬದಲು ಸಿನೆಮಾ ರಂಗದ ಹಲವು ಸಂಸ್ಥೆಗಳನ್ನು ಬಗೆಹರಿಸುವ ಬಗ್ಗೆ ಚರ್ಚಿಸಲಾಯಿತು’ ಎಂದರು.

ಈ ಸಭೆಯಲ್ಲಿ ಚಿತ್ರರಂಗದ ಸಮಸ್ಯೆ ಗಳಾದ ಯುಎಫ್‌ಒ, ಕ್ಯೂಬ್‌, ಮಲ್ಟಿಪ್ಲೆಕ್ಸ್‌ ಗಳಲ್ಲಿ ಟಿಕೆಟ್‌ ದರದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಕೇರಳದಲ್ಲಿ ಸರಕಾರವೇ ಒಟಿಟಿ ವ್ಯವಸ್ಥೆ ಜಾರಿಗೆ ತಂದಿದೆ. ಅದೇ ಮಾದರಿಯನ್ನು ರಾಜ್ಯದಲ್ಲಿಯೂ ಜಾರಿ ಮಾಡುವ ಬಗ್ಗೆ ಸರಕಾರದ ಗಮನ ಸೆಳೆಯಲು ಮನವಿ ಸಲ್ಲಿಸುವ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ ಎಂದು ಸುರೇಶ್‌ ಹೇಳಿದ್ದಾರೆ. ಸ್ಟಾರ್‌ ನಟರ ಸಿನೆಮಾಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ತಡವಾಗು ತ್ತಿರುವುದರಿಂದ ಸಿನೆಮಾ ಬಿಡುಗಡೆಯೂ ಮುಂದಕ್ಕೆ ಹೋಗುತ್ತಿದೆ ಎಂದು ಸಭೆಯಲ್ಲಿ ನಿರ್ಮಾಪಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next