Advertisement

ಮಂಗಳೂರು: ಮಾರ್ಚ್‌ 22 ಕನ್ನಡ ಸಿನೆಮಾದ ಆಡಿಯೋ ಬಿಡುಗಡೆ

06:25 AM Jul 21, 2017 | Harsha Rao |

ಮಂಗಳೂರು: ಅಕೆ¾ (ಎಸಿಎಂಇ) ಮೂವೀಸ್‌ ಇಂಟರ್‌ನ್ಯಾಶನಲ್‌ ಸಂಸ್ಥೆಯ ಮೂಲಕ ಮಂಗಳೂರು ಮೂಲದ ದುಬೈಯ ಉದ್ಯಮಿ ಹರೀಶ್‌ ಶೇರಿಗಾರ್‌ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್‌ ನಿರ್ಮಿಸಿರುವ; ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹುನಿರೀಕ್ಷಿತ “ಮಾರ್ಚ್‌ 22′ ಕನ್ನಡ ಸಿನೆಮಾದ ಧ್ವನಿಸುರುಳಿ (ಆಡಿಯೋ) ಬಿಡುಗಡೆ ಗುರುವಾರ ಮಂಗಳೂರಿನ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರಿನಲ್ಲಿ ನಡೆಯಿತು. 
ಸಿನೆಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ಅನಂತ್‌ನಾಗ್‌ ಆಡಿಯೋ ಬಿಡುಗಡೆ ಮಾಡಿದರು. ಕನ್ನಡ ಚಿತ್ರರಂಗದಲ್ಲಿ ಮಾರ್ಚ್‌ 22 ಸಿನೆಮಾ ವಿಭಿನ್ನ ನೆಲೆಯಲ್ಲಿ ಮೂಡಿಬಂದಿದೆ. ಸಹೋದರತೆಯ ಭಾವ ಹಾಗೂ ಜೀವಜಲದ ಮಹತ್ವ ನಮ್ಮೆಲ್ಲರಲ್ಲೂ ಜಾಗೃತಿಯಾಗಿರಬೇಕು. ಈ ನೆಲೆಯಲ್ಲಿ ಮಾರ್ಚ್‌ 22 ಸಿನೆಮಾ ಪರಿಪೂರ್ಣ ಸಂದೇಶದೊಂದಿಗೆ ಮೂಡಿಬಂದಿದೆ ಎಂದರು. 

Advertisement

ಸಿನೆಮಾದ ಹಾಡುಗಳ ಟೀಸರ್‌ನ್ನು ನಟ ಆಶಿಷ್‌ ವಿದ್ಯಾರ್ಥಿ ಬಿಡುಗಡೆಗೊಳಿಸಿದರು. ಮಂಗಳೂರು ಮೇಯರ್‌ ಕವಿತಾ ಸನಿಲ್‌ ಕಾರ್ಯಕ್ರಮ ಉದ್ಘಾಟಿಸಿದರು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್‌, ಪ್ರಮುಖರಾದ ಸುರೇಶ್‌, ಕರಿ ಸುಬ್ಬ, ಕದ್ರಿ ಮಣಿಕಾಂತ್‌, ರವಿಶೇಖರ್‌, ಕೀರ್ತಿಗೌಡ, ವೀರೇಶ್‌, ಅರ್ಯವರ್ದನ್‌, ಕಿರಣ್‌ ರಾಜ್‌, ಜಾಕ್‌ ಮಂಜು, ಮೇಘ ಶೀÅ, ದೀಪ್ತಿ ಶೆಟ್ಟಿ, ರೆ |ಫಾ |ರಿಚರ್ಡ್‌ ಅಲೋಶಿಯಸ್‌ ಕೊಯಿಲೋ, ಹರಿಕೃಷ್ಣ ಪುನರೂರು, ಡಾ| ಕೆ.ವಿ.ದೇವಾಡಿಗ, ಡಾ| ಅಖ್ತರ್‌ ಹುಸೈನ್‌, ಎಂ.ಕೆ.ಹರೀಶ್ಚಂದ್ರ,ಡಾ| ಎ.ಜೆ.ಶೆಟ್ಟಿ, ಡಾ| ಭಾಸ್ಕರ್‌ ಶೆಟ್ಟಿ, ಅಶೋಕ್‌ ಪುರೋಹಿತ್‌, ಪಿ.ಸಿ. ಮಲ್ಲಪ್ಪ, ಗಿರಿಧರ್‌ ಭಟ್‌, ಪ್ರಶಾಂತ್‌ ಶೇರಿಗಾರ್‌, ಶೀÅನಿವಾಸ ಶೇರಿಗಾರ್‌, ಚಿತ್ರ ನಿರ್ಮಾಪಕರಾದ ಹರೀಶ್‌ ಶೇರಿಗಾರ್‌, ಅವರ ಪತ್ನಿ ಶರ್ಮಿಳಾ ಶೇರಿಗಾರ್‌, ನಿರ್ದೇಶಕ ಕೂಡ್ಲು ರಾಮಕೃಷ್ಣ, ನಟರಾದ ಜೈ ಜಗದೀಶ್‌, ಶರತ್‌ ಲೋಹಿತಾಶ್ವ ಹಾಗೂ ಕಲಾವಿದರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next