Advertisement

ನಟಿ -ನಿರ್ದೇಶಕನ ಪ್ರೇಮ ಪ್ರಕರಣಕ್ಕೆ ತಿರುವು; ಗಂಡನ ಮನೆಯಲ್ಲಿ ನಟಿ ವಿಜಯಲಕ್ಷ್ಮಿ ಪ್ರತ್ಯಕ್ಷ

10:08 AM Jan 10, 2020 | keerthan |

ರಾಯಚೂರು: ನಟಿ ಹಾಗೂ ಸಹ ನಿರ್ದೇಶಕನ ಪ್ರೇಮ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತಮಗೆ ಜೀವ ಭಯವಿದ್ದು ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ನಟಿ ವಿಜಯಲಕ್ಷ್ಮಿ ನಾನು ಇಷ್ಟಪಟ್ಟು ಮದುವೆಯಾಗಿದ್ದು, ಮನೆಯವರು ನಮ್ಮನ್ನು ಬೇರ್ಪಡಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

Advertisement

ಗಂಗಾವತಿಯಲ್ಲಿ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದು, ನಮ್ಮನ್ನು ನಮ್ಮ ಪಾಡಿಗೆ ಇರಲು ಬಿಡಿ ಎಂದು ಬೇಡಿಕೊಂಡಿದ್ದಾರೆ.  ರಾಯಚೂರಿನ ಸಿರವಾರ ಸಮೀಪದ ಹಳ್ಳಿಹೊಸುರು ನನ್ನ ಗಂಡನ ಮನೆ. ಹೀಗಾಗಿ ರಾಯಚೂರು ಎಸ್‍ಪಿ ಡಾ. ಸಿ.ಬಿ ವೇದಮೂರ್ತಿಯವರನ್ನು ಭೇಟಿ ಮಾಡಿ ರಕ್ಷಣೆಗಾಗಿ ಮನವಿ ಮಾಡಿದ್ದೇವೆ. ನಮ್ಮನ್ನು ಬದುಕಲು ಬಿಡಿ, ನಾವು ಮುಂದಿನ ದಿನಗಳಲ್ಲಿ ಸಿನಿಮಾ ಮಾಡುತ್ತೇವೆ ಅಂತ ವಿಜಯಲಕ್ಷ್ಮಿ ಹಾಗೂ ಆಂಜಿನಪ್ಪ ಮನವಿ ಮಾಡಿದ್ದಾರೆ.

ನಾನು ಸಹ ನಿರ್ದೇಶಕ ಆಂಜಿನಪ್ಪರನ್ನು ಲವ್ ಮಾಡಿ ಮದುವೆ ಆಗಿದ್ದೇನೆ. ನಾನು ಯಾವ ನಿರ್ಮಾಪಕರ ಬಳಿ ಹಣ ಪಡೆದು ಪರಾರಿಯಾಗಿಲ್ಲ. ನಾನು ತುಂಗಭದ್ರಾ ಸಿನಿಮಾದಲ್ಲಿ ನಟಿಸುವಾಗ ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನನ್ನನ್ನು ಯಾರೂ ಕರೆದುಕೊಂಡು ಬಂದಿಲ್ಲ. ನಮ್ಮ ಅಜ್ಜಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ನಮ್ಮ ತಾಯಿ ನಾಟಕ ಮಾಡುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ದೂರಿದ್ದಾರೆ.

ನನ್ನ ತಾಯಿ ಈ ರೀತಿ ವಿಷ ಸೇವಿಸುವುದಾಗಿ ಈ ಮುಂಚೆಯೂ ನಾಟಕ ಮಾಡಿದ್ದರು. ನನ್ನ ತಂದೆ-ತಾಯಿ ಬೇರೆಯಾಗಿ 6 ವರ್ಷವಾಗಿದೆ. ನನ್ನ ತಾಯಿ ಮತ್ತು ನನ್ನ ಸಾಕು ತಂದೆ ನನಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ನನಗೆ ಚಿತ್ರ-ವಿಚಿತ್ರ ಹಿಂಸೆ ನೀಡಿದ್ದಾರೆ. ನಾನು ಮದುವೆ ಆಗಿರುವ ವಿಷಯ ತಿಳಿದು ನನ್ನ ಗಂಡನನ್ನು ಸಾಯಿಸಲು ಪ್ಲಾನ್ ಮಾಡಿದ್ದರು ಎಂದು ವಿಜಯಲಕ್ಷ್ಮಿ ದೂರಿದ್ದಾರೆ

Advertisement

ನಾವು ಬರುವಾಗ ಯಾರ ಬಳಿಯೂ ಹಣ, ಒಡವೆಯಾಗಲಿ ತಂದಿಲ್ಲ. ನನ್ನ ತಾಯಿಗೆ ಹಾಗೂ ಸಾಕು ತಂದೆ ಹಣದಾಹಿಗಳಾಗಿದ್ದು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಂದೆ ನಾವು ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next