Advertisement

ನಾಗಕನ್ಯೆ ಮೇಘಶ್ರೀ

11:21 AM Jul 06, 2021 | Team Udayavani |

ಹಿರುತೆರೆ ಮತ್ತುಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ನಟಿ ಮೇಘಶ್ರೀ, ಶೀಘ್ರದಲ್ಲಿಯೇ ನಾಗಕನ್ನಿಕೆ ರೂಪದಲ್ಲಿಕಿರುತೆರೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

Advertisement

ಹೌದು, ಸದ್ಯ “ಮನಸಾಗಿದೆ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಮೇಘಶ್ರೀ, ಇದರ ನಡುವೆಯೇ “ಜ್ಯೋತಿ’ ಎಂಬ ಹೊಸ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ನಾಗಕನ್ನಿಕೆ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಜ್ಯೋತಿ’ ಧಾರಾವಾಹಿಯಲ್ಲಿ ಮೇಘಶ್ರೀ ಗೆಟಪ್‌ ಹೊರಬಂದಿದ್ದು, ಅವರಪಾತ್ರ ಒಂದಷ್ಟು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಐದು ಭಾಷೆಗಳಲ್ಲಿಈಧಾರಾವಾಹಿ ನಿರ್ಮಾಣವಾಗಿದ್ದು, ಕನ್ನಡದಲ್ಲಿ ಇದೇ ವಾರದಿಂದ “ಜ್ಯೋತಿ’ ಪ್ರಸಾರವಾಗಲಿದೆ.

ಇದನ್ನೂ ಓದಿ:ಅರ್ಜುನ್ ಸರ್ಜಾರ ಕನಸಿನ ಶ್ರೀ ಯೋಗಾಂಜನೇಯ್ಯ ಸ್ವಾಮಿ ದೇವಾಲಯ ಹೇಗಿದೆ ನೋಡಿ

ಈ ಬಗ್ಗೆ ಮಾತನಾಡುವ ನಟಿ ಮೇಘಶ್ರೀ, “ಇದೊಂದು ಥ್ರಿಲ್ಲರ್‌ ಅಂಶಗಳನ್ನೊಳಗೊಂಡ ಧಾರಾವಾಹಿ. ಇದರ ಕಥೆ ಕಾಲ್ಪನಿಕವಾದರೂ, ನೋಡುಗರಿಗೆ ಥ್ರಿಲ್ಲಿಂಗ್‌ ಅನುಭವವನ್ನು ಕೊಡುತ್ತದೆ. ನಾಗಿಣಿ, ಕ್ಷುದ್ರ ಶಕ್ತಿಗಳು ಅವುಗಳ ನಡುವಿನ ಹೋರಾಟದ ಸುತ್ತ ಇದರ ಕಥೆ ನಡೆಯುತ್ತದೆ. ಬೇರೆ ಭಾಷೆಗಳಲ್ಲಿ ಈಗಾಗಲೇ ಈ ಧಾರಾವಾಹಿ ಪ್ರಸಾರವಾಗುತ್ತ, ಆಡಿಯನ್ಸ್‌ಗೆ ಇಷ್ಟವಾಗುತ್ತಿದೆ.ಕನ್ನಡ ಪ್ರೇಕ್ಷಕರಿಗೂ “ಜ್ಯೋತಿ’ ಇಷ್ಟವಾಗುತ್ತಾಳೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.

ಅಂದಹಾಗೆ, “ಜ್ಯೋತಿ’ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ9.30ಕ್ಕೆ ಖಾಸಗಿ ವಾಹಿಯಲ್ಲಿ ಪ್ರಸಾರವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next