Advertisement

‘ಕೊರಳಿನಲ್ಲಿ ಹಾವು’: ಈ ದೃಶ್ಯದ ಹಿಂದಿನ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡ ಜಗ್ಗೇಶ್

04:29 PM Aug 13, 2021 | Team Udayavani |

ಬೆಂಗಳೂರು: ‘ಬೇಡ ಕೃಷ್ಣ ರಂಗಿನಾಟ’ ಚಿತ್ರದಲ್ಲಿಯ ಒಂದು ದೃಶ್ಯದ ಹಿಂದಿರುವ ಕುತೂಹಲಕಾರಿ ವಿಷಯವೊಂದನ್ನು ನಟ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.

Advertisement

ರಾಜ್ ಕಿಶೋರ್ ನಿರ್ದೇಶನದ 1994ರಲ್ಲಿ ತೆರೆ ಕಂಡಿದ್ದ ‘ಬೇಡ ಕೃಷ್ಣ ರಂಗಿನಾಟ’ ಚಿತ್ರದಲ್ಲಿ ಜಗ್ಗೇಶ್ ಅವರು ನಾಯಕ ನಟರಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ದೃಶ್ಯವೊಂದರಲ್ಲಿ ಜಗ್ಗೇಶ್  ಕೊರಳಿನಲ್ಲಿ ಹಾವು ಇರುತ್ತದೆ. ನಾಗರ ಪಂಚಮಿಯ ಸೀನ್ ಗಾಗಿ ಈ ದೃಶ್ಯ ಸೆರೆ ಹಿಡಿಯಲಾಗಿತ್ತು. ಈ ಸೀನ್ ಇಂದೆ ಇರುವ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನು ಜಗ್ಗೇಶ್ ರಿವೀಲ್ ಮಾಡಿದ್ದಾರೆ.

ಇದು ಅದ್ಭುತ ದೃಶ್ಯ. ಆದರೆ ಅಂದು ಹೃದಯ ಬಾಯಿಗೆ ಬಂದಿತ್ತು. ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೇ. ಅಲ್ಲಿ ಆಡಿರುವುದು ಸಂಭಾಷಣೆ ಅಲ್ಲ, ಭಯಕ್ಕೆ ನಿರ್ದೇಶಕನನ್ನು ಬೈದದ್ದು. ನಂತರ ಡಬ್ಬಿಂಗ್‍ನಲ್ಲಿ ಈ ಸಂಭಾಷಣೆ ಹೇಳಿದ್ದು. ಪಾಪ ಈ ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್. ಸತ್ತು 17 ವರ್ಷ ಆಯಿತು. ಅಮರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ನಾಗರ ಪಂಚಮಿ ದಿನವಾದ ಇಂದು ಅಭಿಮಾನಿಯೋರ್ವ ಜಗ್ಗೇಶ್ ನಟನೆಯ ಬೇಡ ಕೃಷ್ಣ ರಂಗಿನಾಟ ಚಿತ್ರದ ದೃಶ್ಯ ಹಂಚಿಕೊಂಡಿದ್ದರು. ಅದರ ಶೂಟಿಂಗ್ ನೆನಪನ್ನು ಜಗ್ಗೇಶ್ ಬಿಚ್ಚಿಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next