Advertisement

ಕೃಷಿ ಕಾಯ್ದೆ ಹೇಳಿಕೆ ವಾಪಸ್‌ ಪಡೆದ ಕಂಗನಾ: ಮೋದಿ ಸ್ಪಷ್ಟನೆ ಕೇಳಿದ ರಾಹುಲ್‌

08:52 PM Sep 25, 2024 | Team Udayavani |

ಶಿಮ್ಲಾ: ವಿವಾದಿತ 3 ಕೃಷಿ ಕಾಯ್ದೆಗಳನ್ನು ಸರ್ಕಾರ ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಣೌತ್‌ ಬುಧವಾರ ತಮ್ಮ ಹೇಳಿಕೆ ಹಿಂಪಡೆದಿದ್ದಾರೆ.

Advertisement

ಅಲ್ಲದೇ, ಈ ಹೇಳಿಕೆ ಬರೀ ನನ್ನ ಅಭಿಪ್ರಾಯವಾಗಿತ್ತು. ಪಕ್ಷದ ನಿಲುವಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ನಟಿ “ಈಗ ನಾನು ಬರೀ ನಟಿಯಲ್ಲ, ಬಿಜೆಪಿ ಸಂಸದೆ. ಹಾಗಾಗಿ ನನ್ನ ಹೇಳಿಕೆಗಳು ವೈಯಕ್ತಿಕ ಮಾತ್ರವಲ್ಲದೇ, ಪಕ್ಷವನ್ನೂ ಪ್ರತಿನಿಧಿಸಬಹುದು ಎಂಬುದು ಅರ್ಥವಾಗಿದೆ.

ನಾನು ಆ ಹೇಳಿಕೆ ವಾಪಸ್‌ ಪಡೆಯುತ್ತೇನೆ’ ಎಂದಿದ್ದಾರೆ. ಇದೇ ವೇಳೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿ, “ಪ್ರಧಾನಿ ಮೋದಿ ಅವರೇ, ನಿಮ್ಮ ಸಂಸದೆ ವಿವಾದಿತ ಕೃಷಿ ಕಾಯ್ದೆ ವಾಪಸ್‌ ತರುವ ಬಗ್ಗೆ ಮಾತಾಡಿದ್ದಾರೆ. ಇದನ್ನು ನೀವು ವಿರೋಧಿಸುವಿರಾ ಅಥವಾ ನೀವೂ ಶಾಮೀಲಾಗಿದ್ದೀರಾ ಎಂದು ಸ್ಪಷ್ಟನೆ ನೀಡಿ’ ಎಂದಿದ್ದಾರೆ.

ಇದನ್ನೂ ಓದಿ: Mahalakshmi Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ… ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next