Advertisement

ರೇಪ್‌, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ

11:29 PM Jun 08, 2024 | Team Udayavani |

ಹೊಸದಿಲ್ಲಿ: ತಮ್ಮ ಮೇಲೆ ಹಲ್ಲೆ ನಡೆಸಿದ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್‌ ಕೌರ್‌ಗೆ ಬೆಂಬಲ ವ್ಯಕ್ತ ಪಡಿಸುತ್ತಿರುವವರ ವಿರುದ್ಧ ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಣೌತ್‌ ಗರಂ ಆಗಿದ್ದಾರೆ.

Advertisement

ಈ ಅಪರಾಧ ಬೆಂಬಲಿಸವವರು ಅತ್ಯಾಚಾರ, ಕೊಲೆಯನ್ನೂ ಬೆಂಬಲಿಸುವಿರಾ ಎಂದು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ನಟಿ ” ಪ್ರತಿಯೊಬ್ಬ ಅತ್ಯಾಚಾರಿ, ಕೊಲೆಗಾರ, ಕಳ್ಳ ಅಪರಾಧ ಕೃತ್ಯ ಎಸಗುವುದಕ್ಕೆ ಭಾವನಾತ್ಮಕ ವಾಗೋ, ಮಾನಸಿಕವಾಗಿಯೋ ಒಂದು ಬಲವಾದ ಕಾರಣವನ್ನು ಹೊಂದಿರುತ್ತಾನೆ. ಹಾಗೆಂದು ಆತ ಅಪರಾಧ ಎಸಗಿದ್ದು ಸರಿ ಎಂದು ನೀವು ಒಪ್ಪಕೊಳ್ಳುವಿರಾದರೆ, ಅತ್ಯಾಚಾರ ಕೊಲೆಯನ್ನೂ ನೀವು ಸಮರ್ಥಿಸಿಕೊಳ್ಳುವಿರಾ ಎಂದಿದ್ದಾರೆ. ಮತ್ತೊಂದೆಡೆ ಕುಲ್ವಿಂದರ್‌ಗೆ ರೈತ ನಾಯಕರಾದ ಸರ್ವನ್‌ ಸಿಂಗ್‌ ಫ‌ಂದೇರ್‌, ಗಜಿತ್‌ ಸಿಂಗ್‌ ದಲ್ಲೆವಾಲ್‌ ಪಂಜಾಬ್‌ ಡಿಜಿಪಿಯನ್ನು ಭೇಟಿಯಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next