Advertisement

Bollywood ಮೌನದ ವಿರುದ್ಧ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್‌ ಕಿಡಿ

12:38 AM Jun 08, 2024 | Team Udayavani |

ಹೊಸದಿಲ್ಲಿ: ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್‌ ಕೆನ್ನೆಗೆ ಬಾರಿಸಿದ ಆರೋಪ ಹೊತ್ತಿರುವ ಸಿಐಎಸ್‌ಎಫ್ ಪೇದೆಯನ್ನು ಶುಕ್ರವಾರ ಬಂಧಿಸಲಾಗಿದೆ. ಗುರುವಾರ ಮಧ್ಯಾಹ್ನ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದ ಕೂಡಲೇ ಕುಲ್ವಿಂದರ್‌ ಕೌರ್‌ರನ್ನು ವಶಕ್ಕೆ ಪಡೆದು, ಸೇವೆಯಿಂದ ಅಮಾನತು ಮಾಡಲಾಗಿತ್ತು. ಸಿಐಎಸ್‌ಎಫ್ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಕುಲ್ವಿಂದರ್‌ ವಿರುದ್ಧ ಎಫ್ಐಆರ್‌ ದಾಖಲಾಗಿತ್ತು. ಕುಲ್ವಿಂದರ್‌ ವಿರುದ್ಧ ಕಂಗನಾ ದೂರು ನೀಡಿದ್ದಾರೆ. ಹಿಂದೆ ರೈತ ಪ್ರತಿಭಟನೆ ನಡೆದಿದ್ದಾಗ, ಪಂಜಾಬ್‌ನಲ್ಲಿ ರೈತರು 100 ರೂ. ಹಣ ಪಡೆದು ಧರಣಿ ಕೂತಿದ್ದಾರೆಂದು ಕಂಗನಾ ಹೇಳಿದ್ದರು. ಆ ಸಿಟ್ಟಿಗೆ ಕಪಾಳಮೋಕ್ಷ ಮಾಡಿದ್ದಾಗಿ ಕೌರ್‌ ಹೇಳಿದ್ದಾರೆ.

Advertisement

ಬಾಲಿವುಡ್‌ ಮೌನದ ವಿರುದ್ಧ ಕಂಗನಾ ಕಿಡಿ
ತನ್ನ ಮೇಲೆ ಹಲ್ಲೆ ನಡೆದಿದ್ದರೂ ಮೌನವಾಗಿರುವ ಬಾಲಿವುಡ್‌ ಮಂದಿಯ ವಿರುದ್ಧ ಕಂಗನಾ ಕಿಡಿಕಾರಿದ್ದಾರೆ. “ರಫಾದತ್ತ ಕಣ್ಣಿಟ್ಟಿರುವ ಗ್ಯಾಂಗಿಗೆ’ ಗೊತ್ತಿರಲಿ. ನಿಮಗೂ, ನಿಮ್ಮ ಮಕ್ಕಳಿಗೂ ಹೀಗೆ ಆಗಬಹುದು. ಇನ್ನೊಬ್ಬರ ಮೇಲಾದ ಉಗ್ರಕೃತ್ಯವನ್ನು ಸಂಭ್ರಮಿಸುವ ನಿಮಗೆ, ಅಂತಹದ್ದೇ ಸ್ಥಿತಿ ಎದುರಾಗುತ್ತದೆ ಎಂದು ಗೊತ್ತಿರಲಿ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇನ್ನೊಂದು ಪೋಸ್ಟನ್ನು ಅವರು ಅಳಿಸಿದ್ದಾರೆ. ಇಸ್ರೇಲ್‌, ಪ್ಯಾಲೆಸ್ತೀನಿನ ರಫಾ ನಗರದ ಮೇಲೆ ದಾಳಿ ಮಾಡಿದ ಬೆನ್ನಲ್ಲೇ “ಆಲ್‌ ಐಸ್‌ ಆನ್‌ ರಫಾ’ ಎಂದು ಬಾಲಿವುಡ್‌ನ‌ ಕೆಲವರು ಪೋಸ್ಟ್‌ ಮಾಡಿದ್ದರು. ಪರೋಕ್ಷವಾಗಿ ಕಂಗನಾ ಅದನ್ನು ವಿರೋಧಿಸಿದ್ದಾರೆ.

ಕೌರ್‌ಗೆ 1 ಲಕ್ಷ ರೂ. ಬಹುಮಾನ ಘೋಷಣೆ
ಕಂಗನಾಗೆ ಕಪಾಳಮೋಕ್ಷ ಮಾಡಿದ ಕೌರ್‌ಗೆ ಮೊಹಾಲಿ ಮೂಲದ ಉದ್ಯಮಿ ಶಿವರಾಜ್‌ ಸಿಂಗ್‌ ಬೈನ್ಸ್‌ 1 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಇದೇ ವೇಳೆ, ತಮ್ಮ ಸಹೋದರಿಯ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಕೌರ್‌ ಅಣ್ಣ, ರೈತ ನಾಯಕ ಶೇರ್‌ ಸಿಂಗ್‌ ಮಹಿವಾಲ್‌, “ಈ ದೇಶಕ್ಕೆ ಯೋಧರು, ರೈತರು ಇಬ್ಬರೂ ಮುಖ್ಯ. ನನ್ನ ತಂಗಿಯ ಕೃತ್ಯವನ್ನು ಬೆಂಬಲಿಸುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next