Advertisement

ಕಂದಾವರ: ಶಿಲಾಶಾಸನ ಪತ್ತೆ

01:24 AM May 16, 2019 | sudhir |

ಕುಂದಾಪುರ: ಬಸೂÅರು ಸಮೀಪದ ಕಂದಾವರದಲ್ಲಿ ವಿಜಯನಗರ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದ್ದು, ಸೂರ್ಯ, ಚಂದ್ರ, ಶಿವಲಿಂಗ, ದೀಪ ಹಾಗೂ ಬಸವನ ಕೆತ್ತನೆಯಿದೆ. ವಿಶೇಷವೆಂದರೆ ಮೇಲ್ಭಾಗದ ಪ್ರಭಾವಳಿಯಲ್ಲಿ ವೀರಭದ್ರ, ಬೊಬ್ಬರ್ಯನಂತೆ ಕಾಣುತ್ತದೆ.

Advertisement

ಈ ಕೆತ್ತನೆಯಲ್ಲಿನ ಆಕೃತಿ ಖಡ್ಗವನ್ನು ಹೊಂದಿದ್ದು, ಮೇಲ್ಭಾಗದ ಪ್ರಭಾವಳಿಯಲ್ಲಿದೆ. ಶಾಸನ ದೊರಕಿದ ಪಕ್ಕದಲ್ಲೇ ಒಂದು ಶಿವಲಿಂಗದ ಕೆತ್ತನೆ ಇರುವ ಶೈವ ಮುದ್ರಾ ಕಲ್ಲು (ಲಿಂಗ ಮುದ್ರಾ ಕಲ್ಲು)ದೊರೆತಿದ್ದು, ಇದು ಶೈವರ ಆರಾಧನಾ ವ್ಯಾಪ್ತಿಯ ಗಡಿಯನ್ನು ಸೂಚಿಸುತ್ತದೆ.

ಸದ್ಯ ಈ ಶಾಸನ ಅಧ್ಯಯನದ ಹಂತದಲ್ಲಿದ್ದು, ಪೂರ್ಣವಾದ ಮೇಲೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಪ್ರದೀಪ ಕುಮಾರ್‌ ಬಸೂÅರು ಅವರು ಶಶಿಕಾಂತ್‌ ಎಸ್‌ .ಕೆ ಸಹಕಾರದಲ್ಲಿ, ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕ ಪುರುಷೋತ್ತಮ ಬಲ್ಯಾಯ ಅವರ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next