Advertisement

ಮಾರಕಾಸ್ತ್ರ ಹಿಡಿದು ದರೋಡೆಗೆ ಯತ್ನಿಸುತ್ತಿದ್ದ ಐವರು ಪೊಲೀಸರ ವಶಕ್ಕೆ

01:02 PM Mar 29, 2022 | Team Udayavani |

ಕನಕಪುರ: ದರೋಡೆ ಮಾಡಲು ಮಾರಕಾಸ್ತ್ರಗಳನ್ನು ಹಿಡಿದು ಹೊಂಚು ಹಾಕುತ್ತಿದ್ದ ಐವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಚನ್ನೇಗೌಡನ ದೊಡ್ಡಿ ಶರತ್ ಕುಮಾರ್ (29) ಕೈಲಾಂಚ ಹೋಬಳಿ ಸಿಬಕಟ್ಟೆ ಗ್ರಾಮದ ರೇವಣ್ಣ ಅಲಿಯಾಸ್ ರೇವ (25) ಬಿಡದಿ ಹೋಬಳಿಯ ಪುಟ್ಟಿರಮ್ಮನ ದೊಡ್ಡಿ ಹರೀಶ್ ಅಲಿಯಾಸ್ ಜೋಗಯ್ಯ (32) ಮಳವಳ್ಳಿ ತಾಲೂಕು ಕಿರುಗಾವಲು ಹೋಬಳಿಯ ಕೂದೇನಕೊಪ್ಪಲು ಗ್ರಾಮದ ಸಿದ್ದರಾಜು (19) ಹಾಗೂ ಮದ್ದೂರು ಮೂಲದ ಸುರೇಶ್ ಬಂಧಿತ ಆರೋಪಿಗಳು.ತಾಲೂಕಿನ ಹಾರೋಹಳ್ಳಿ ಹೋಬಳಿಯ ಕೂದೆನಕೊಪ್ಪಲು ಗ್ರಾಮದ ಸಿದ್ದರಾಜು (19) ಹಾಗೂ ಮದ್ದೂರು ಮೂಲದ ಸುರೇಶ್ ಬಂಧಿತ ಆರೋಪಿಗಳು.

ಬಿಡದಿ ದೊಡ್ಡಮುದವಾಡಿ ರಸ್ತೆಯಲ್ಲಿರುವ ದೊಂಬರದೊಡ್ಡಿ ಗ್ರಾಮದ ಬಳಿ ಮಾ.24ರಂದು ತಡರಾತ್ರಿ 1 ಗಂಟೆ ಸಮಯದಲ್ಲಿ ಐವರು ದರೋಡೆಕೋರರು ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಮಾಡಲು
ಹೊಂಚು ಹಾಕುತ್ತಿದ್ದರು. ಈ ಕುರಿತ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಹೇಮಂತ್‌ ಕುಮಾರ್‌ ನೇತೃತ್ವದಲ್ಲಿ ಎಎಸ್‌ಐ ಪದ್ಮ ಶಂಕರ್‌, ಸಿಬ್ಬಂದಿಗಳಾದ ರಮೇಶ, ಜಯಣ್ಣ, ಮನು ಪೂಜಾರಿ, ಸುರೇಶ್‌, ಚಾಲಕ ಶಿವಪ್ಪ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 1.07 ಲಕ್ಷ ರೂ. ನಗದು, ಎರಡು ದ್ವಿಚಕ್ರ ವಾಹನ, 4 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಕಪಾಳ ಮೋಕ್ಷ: ಕ್ರಿಸ್‌ ರಾಕ್ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ವಿಲ್ ಸ್ಮಿತ್

ಪ್ರಕರಣವನ್ನು ಭೇದಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next