Advertisement

Kanakagiri ಯುಜಿಡಿ ಯೋಜನೆ ಶೀಘ್ರವೇ ಜಾರಿಗೆ: ಸಚಿವ ಶಿವರಾಜ್ ತಂಗಡಗಿ

09:48 PM Dec 22, 2023 | Team Udayavani |

ಕನಕಗಿರಿ : ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಪಟ್ಟಣದ ರಾಜಬೀದಿ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಯ ಭೂಮಿ ಪೂಜೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶುಕ್ರವಾರ ಕನಕಾಚಲಪತಿ ರಥದ ನಿಲುಗಡೆ ಆವರಣದಲ್ಲಿ ನೆರವೇರಿಸಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕನಕಗಿರಿ, ಕಾರಟಗಿ, ತಾವರಗೇರಾ, ಕುಕೂನೂರು, ತಾಲ್ಲೂಕಿನಲ್ಲಿ ಯುಜಿಡಿ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ. ಈಗಾಗಲೇ ಸರ್ವೆ ಮತ್ತು ಎಸ್ಟೇಮೆಂಟ್ ಕಾಪಿ ತಯಾರಿದೆ. ದೇವನಹಳ್ಳಿ ಏರ್‌ಪೋರ್ಟ್ ನಿರ್ಮಾಣದಂತೆ ಹೊಸ ಟೆಕ್ನಾಲಜಿ ರೂಪದಲ್ಲಿ ನಿರ್ಮಾಣ ಮಾಡಲಾಗುವುದು. ರಾಜ್ಯದಲ್ಲಿ ಕನಿಷ್ಠ 44 ನಗರಗಳಲ್ಲಿ ಯುಜಿಡಿ ಪ್ರಾರಂಭ ಮಾಡಬೇಕೆಂದು ರೂಪಿಸಲಾಗಿದೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next