Advertisement

ಗಂಟಲು ದ್ರವ ಸಂಗ್ರಹ ಆರಂಭ

04:27 PM May 10, 2020 | Team Udayavani |

ಕಂಪ್ಲಿ: ಪಟ್ಟಣದ ಷಾಮಿಯಾಚಂದ್‌ ಪಪೂ ಕಾಲೇಜಿನಲ್ಲಿ ಡೆಡ್ಲಿ ಕೋವಿಡ್ ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಹೊರ ರಾಜ್ಯದಿಂದ ಕಂಪ್ಲಿಗೆ ಬಂದ ಜನರಿಗೆ ಕೋವಿಡ್ ವೈರಸ್‌ ತಪಾಸಣೆ ಹಾಗೂ ನೇಸಲ್‌ ಸ್ವ್ಯಾಬ್‌ ಸಂಗ್ರಹ ಮಾಡಲಾಗುತ್ತಿದೆ.

Advertisement

ಕೋವಿಡ್ ವೈರಸ್‌ ನಿರ್ಮೂಲನೆಗಾಗಿ ಕೆಲವರಿಗೆ ಕೋವಿಡ್ ತಪಾಸಣೆಗೆ ಒಳಪಡಿಸುವ ಜತೆಗೆ ಇನ್ನೂ ಕೆಲವರನ್ನು ಗೃಹ ಬಂಧನದಲ್ಲಿರುವಂತೆ ಮಾಡಿದೆ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಕೆಲವರಿಗೆ ಕೋವಿಡ್ ವೈರಸ್‌ ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ಕೋವಿಡ್ ವೈರಸ್‌ ನಿಯಂತ್ರಣಕ್ಕಾಗಿ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಕಂಪ್ಲಿಯಲ್ಲಿ ಕೋವಿಡ್ ವೈರಸ್‌ ಹರಡದಂತೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಕೆಲವರನ್ನು ಕೋವಿಡ್ ವೈರಸ್‌ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇಲ್ಲಿವರೆಗು ಸಾಕಷ್ಟು ಜನರನ್ನು ತಪಾಸಣೆಗೆ ಒಳಪಡಿಸಿದರೂ ಯಾರಲ್ಲೂ ಕೋವಿಡ್ ಸೋಂಕು ಇಲ್ಲದಿರುವುದು ಸಮಾಧಾನ ತಂದಿದೆ.

ಇನ್ನು ಕೋವಿಡ್ ತಡೆಗೆ ಆರೋಗ್ಯ, ಕಂದಾಯ, ಪೊಲೀಸ್‌, ಪುರಸಭೆ ಇಲಾಖೆ, ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರು ಹಗಲಿರುಳು ಹೋರಾಡುತ್ತಿದ್ದಾರೆ. ವೈದ್ಯಾಧಿಕಾ ಡಾ| ರವೀಂದ್ರ, ಡಾ| ಶ್ರೀನಿವಾಸ, ಲ್ಯಾಬ್‌ ಟೆಕ್ನಿಷಿಯನ್‌ಗಳಾದ ಲಕ್ಷ್ಮೀ ಹೂಗಾರ್‌, ಮಹಾಂತೇಶ್‌, ಡಿ ಗ್ರೂಫ್‌ ನೌಕರರಾದ ಮುಕ್ಕಣ್ಣ, ರಾಮು, ಆಪ್ತ ಸಮಾಲೋಚಕ ಎಂ.ಕೆ. ಮಂಜುನಾಥ, ನರ್ಸ್‌ ನೇತ್ರಾ, ಸಿಬ್ಬಂದಿ ಹರೀಶ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next