Advertisement

ಬಾಳೆತೋಟ ಬೆಂಕಿಗಾಹುತಿ

12:55 PM Jun 01, 2020 | Naveen |

ಕಂಪ್ಲಿ: ತಾಲೂಕಿನ ನಂ10 ಮುದ್ದಾಪುರ ಗ್ರಾಮದ ವಿಜಯನಗರ ಕಾಲುವೆ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದ ಸಕ್ರೆ ದಿಬ್ಬಯ್ಯ ತೋಟ ಬಳಿಯಿರುವ ಹೊಸಪೇಟೆ ತಾಪಂ ಮಾಜಿ ಉಪಾಧ್ಯಕ್ಷ, ಬಾಳೆ ಬೆಳೆಗಾರ ಬಿ.ಎಸ್‌. ವೆಂಕಟಸ್ವಾಮಿಯವರಿಗೆ ಸೇರಿದ (ಸರ್ವೆ ನಂಬರ್ 122 ಮತ್ತು 123ರ ಒಟ್ಟು 2.45 ಎಕರೆ) ಸುಗಂ ಬಾಳೆ ತೋಟ ಆಕಸ್ಮಿಕ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

Advertisement

ಬಾಳೆ ಬೆಳೆಗಾರ ಬಿ.ಎಸ್‌. ವೆಂಕಟಸ್ವಾಮಿ ಮಾತನಾಡಿ, ಬಾಳೆಬೆಳೆ ಚೆನ್ನಾಗಿ ಬೆಳೆದಿದ್ದು, ಇನ್ನು 7-8ದಿನಗಳಲ್ಲಿ ಬಾಳೆಗೊನೆಗಳನ್ನು ಕಟಾವು ಮಾಡಬೇಕಾಗಿತ್ತು. ನಾಲ್ಕೈದು ತಿಂಗಳಲ್ಲಿ ಬಲಿಯಾಗಬೇಕಿದ್ದ ಬಾಳೆ ಮರಿಗಿಡಗಳು ಸಹ ಬೆಂಕಿಗೆ ಆಹುತಿಯಾಗಿ ಕಮರಿಹೋಗಿವೆ. ಒಳ ಮಾಗಾಣಿಯಾಗಿದ್ದರಿಂದ ಅಗ್ನಿಶಾಮಕ ದಳದವರು ಬಂದು ನಂದಿಸಲು ಸಾಧ್ಯವಿಲ್ಲ. ಹೊಗೆ ಬರುವುದನ್ನು ನೋಡಿ ತೋಟದತ್ತ ಹೋದೆ, ತೋಟಕ್ಕೆಲ್ಲ ಬೆಂಕಿ ಬಿದ್ದಿತ್ತು. ಎಕರೆಗೆ 40 ಸಾವಿರದಷ್ಟು ನಷ್ಟವಾಗಿದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next