Advertisement

ರಾಜಕೀಯಕ್ಕೆ ಕಮಲ್‌ಹಾಸನ್‌ ಎಂಟ್ರಿ?

05:50 AM Jul 20, 2017 | Team Udayavani |

ಚೆನ್ನೈ: ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ರಾಜಕೀಯ ಪ್ರವೇಶದ ಬಗ್ಗೆ ತೆರೆ ಮರೆಯ ಸಿದ್ಧತೆ ನಡೆಸಿರುವಂತೆಯೇ ಬಹುಭಾಷಾ ನಟ ಕಮಲ್‌ಹಾಸನ್‌ ಕೂಡ ಅದೇ ದಾರಿಯತ್ತ ಸಾಗಿದ್ದಾರೆ. ಮೈಕ್ರೋ ಬ್ಲಾಗಿಂಗ್‌ ತಾಣ ಟ್ವಿಟರ್‌ನಲ್ಲಿ ಎಂಟು ಸಾಲಿನ ಹಾಡುಗಳನ್ನು ಬರೆದು ಕುತೂಹಲ ತಮಿಳುನಾಡಿನಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಲ ದಿನಗಳ ಹಿಂದೆ ಆರೋಪಿಸಿದ್ದ ಕಮಲ್‌ಹಾಸನ್‌ ಆಡಳಿತಾರೂಡ ಎಐಎಡಿಎಂಕೆ ನಾಯಕರಿಂದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

ಬರಲಿ, ಉತ್ತರಿಸುವೆ: ನಟ ಕಮಲ್‌ ಹಾಸನ್‌ ತಮಿಳುನಾಡಿನಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಎಡಪ್ಪಾಡಿ ಪಳನಿಸ್ವಾಮಿ, ಅವರಿಗೆ ರಾಜಕೀಯ ಎಂದರೇನೆಂದು ಗೊತ್ತಿಲ್ಲ. ಅವರು ಕ್ಷೇತ್ರ ಪ್ರವೇಶ ಮಾಡಿದರೆ ಸೂಕ್ತ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಟ್ವೀಟ್‌ನಲ್ಲಿದ್ದ‌ ಹಾಡು
ಇಲ್ಯಾರು ರಾಜರಿಲ್ಲ ಎಂಬುದ ತೋರಿಸಲು ನಿಮಗೆ ಬಲವಾದ ಪೆಟ್ಟು ಕೊಡಬೇಕು ನೀವು ನಮ್ಮನ್ನೂ ತುಳಿದರೂ ನಾವು ಹೋರಾಡುತ್ತೇವೆ, ಮನಸ್ಸು ಮಾಡಿದ ದಿನವೇ ನಾವು(ಜನರು) ಮುಖ್ಯಮಂತ್ರಿಯಾಗುತ್ತೇವೆ. ತಲೆ ತಗ್ಗಿಸುತ್ತೇವೆ ಎಂದಾಕ್ಷಣ ನಾವು ಗುಲಾಮರೆಂದಲ್ಲ ನಮ್ಮ ತಲೆಯ ಮೇಲೆ ಕಿರೀಟವಿಲ್ಲ ಎಂದಾಕ್ಷಣ ನಾವು ಸೋತವರೆಂದಲ್ಲ, ನಾನೂ ನಿನಗೆ ಕಟುವಾಗಿ ಮಾತನಾಡಬಲ್ಲೆ, ಆದರೆ ಅದು ತಪ್ಪೆಂಬುದ ಬಲ್ಲೆ ಬಾ ಮಿತ್ರ ನನ್ನ ಜೊತೆ, ಹುಡುಕುವವರೆಗೂ ನಿನಗೆ ದಾರಿ ಸಿಗುವುದಿಲ್ಲ, ಅಜ್ಞಾನವನ್ನು ದೂರಮಾಡುವವನೇ ನಾಯಕನಾಗುವ ಓಟದಲ್ಲಿ ಮುಂದಿರುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next