Advertisement

ಅಬ್ರಾಹ್ಮಣ ಅರ್ಚಕರ ನೇಮಕ: ಕೇರಳ CM ಗೆ ಕಮಲ ಹಾಸನ್‌ ಪ್ರಶಂಸೆ

03:59 PM Oct 09, 2017 | Team Udayavani |

ತಿರುವನಂತಪುರ: ತಿರುವಾಂಕೂರು ದೇವಸ್ವಂ ಮಂಡಳಿಯ ಆಡಳಿತೆಗೆ ಒಳಪಟ್ಟ ದೇವಸ್ಥಾನಗಳಿಗೆ ಆರು ದಲಿತರ ಸಹಿತ 36 ಬ್ರಾಹ್ಮಣೇತರ ಅರ್ಚಕರನ್ನು ನೇಮಿಸುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರಕಾರವನ್ನು ಖ್ಯಾತ ನಟ ಕಮಲ ಹಾಸನ್‌ ಸ್ವಾಗತಿಸಿ ಪ್ರಶಂಸಿಸಿದ್ದಾರೆ. 

Advertisement

ಕಮಲ ಹಾಸನ್‌ ಅವರು ಕೇರಳ ಸರಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ  ಪ್ರಶಂಸೆಯ ಮಾತುಗಳನ್ನು ಬರೆದಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಈ ಐತಿಹಾಸಿಕ ನಿರ್ಧಾರದ ಮೂಲಕ ಕ್ರಾಂತಿಕಾರಿ ಚಿಂತಕ ಪೆರಿಯಾರ್‌ ರಾಮಸ್ವಾಮಿ ಅವರ ಕನಸು ನನಸಾದಂತಾಗಿದೆ ಎಂದು ಕಮಲ ಹಾಸನ್‌ ಹೇಳಿದ್ದಾರೆ. 

ಕೇರಳದಲ್ಲಿ ಟಿಡಿಬಿ, ಶಬರಿಮಲೆಯ ಅಯಪ್ಯ ಸ್ವಾಮಿ ದೇವಳ ಸಹಿತ 1,248 ದೇವಾಲಯಗಳ ಆಡಳಿತೆಯನ್ನು ನಿರ್ವಹಿಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next