Advertisement

ಪಕ್ಷದ ದೇಣಿಗೆ ಹಣ ವಾಪಸ್‌ ಮಾಡಲು ಕಮಲ್‌ ನಿರ್ಧಾರ

06:10 AM Nov 17, 2017 | Team Udayavani |

ನವದೆಹಲಿ: ಹೊಸ ಪಕ್ಷ ಘೋಷಣೆಗೂ ಮೊದಲೇ ಪಕ್ಷದ ಸಂಘಟನೆ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಜನ ನೀಡಿರುವ ದೇಣಿಗೆ ಹಣ ವಾಪಸ್‌ ಮಾಡುವುದಾಗಿ ನಟ ಕಮಲ್‌ ಹಾಸನ್‌ ಹೇಳಿದ್ದಾರೆ. 

Advertisement

ಪಕ್ಷ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲೇ ದೇಣಿಗೆ ಸ್ವೀಕರಿಸುವುದು ಅಕ್ರಮವಾಗುತ್ತದೆನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ತಮಿಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ತಮ್ಮ ಅಂಕಣದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕಮಲ್‌, ದೇಣಿಗೆ ಹಣ ವಾಪಸ್‌ ಮಾಡುತ್ತಿದ್ದೇನೆಂದಾಕ್ಷಣ ನನ್ನ ನಿಲುವಿನಿಂದ ಹಿಂದೆ ಸರಿಯುತ್ತಿದ್ದೇನೆ ಎಂದರ್ಥವಲ್ಲ. ಹೊಸ ಪಕ್ಷ ಸ್ಥಾಪನೆ ಕುರಿತ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಪಕ್ಷ ಘೋಷಣೆಗೂ ಮೊದಲು ಪ್ರಧಾನಿ ಮೋದಿ ಅವರ ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡುವ ಬಗ್ಗೆಯೂ ಸುಳಿವು ನೀಡಿದ್ದಾರೆ.

ಕಮಲ್‌ ವಿರುದ್ಧ ಕೋರ್ಟ್‌ಗೆ ಅರ್ಜಿ: “ಹಿಂದೂ ಭಯೋ ತ್ಪಾದನೆ’ ಹೇಳಿಕೆ ಸಂಬಂಧ ಕಮಲ್‌ ವಿರುದ್ಧ ಪ್ರಕರಣ ದಾಖ ಲಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next