Advertisement

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ –ಕಮಲ ಹಾಸನ್‌ ‘ಸೌಹಾರ್ದ’ಭೇಟಿ

07:06 PM Jun 20, 2018 | udayavani editorial |

ಹೊಸದಿಲ್ಲಿ : ರಾಜಕಾರಣಿಯಾಗಿ ಪರಿವರ್ತಿತರಾಗಿರುವ ನಟ ಕಮಲ ಹಾಸನ್‌ ಅವರಿಂದು ಬುಧವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ದಿಲ್ಲಿಯಲ್ಲಿನ ತುಘಲಕ್‌ ಲೇನ್‌ನಲ್ಲಿರುವ ಅವರ ನಂ.12 ನಿವಾಸದಲ್ಲಿ ಭೇಟಿಯಾದರು. ಸುಮಾರು ಅರ್ಧ ತಾಸು ಕಾಲ ರಾಹುಲ್‌ – ಕಮಲ್‌ ಕುಶಲೋಪರಿ ನಡೆಸಿದರು. 

Advertisement

ಮಕ್ಕಳ್‌ ನೀದಿ ಮೈಯ್ಯಂ ಎಂಬ ನೂತನ ರಾಜಕೀಯ ಪಕ್ಷವನ್ನು ಈಚೆಗೆ ಹುಟ್ಟುಹಾಕಿರುವ ಕಮಲ ಹಾಸನ್‌ ಅವರು ರಾಹುಲ್‌ ಜತೆಗಿನ ಮಾತುಕತೆಯಲ್ಲಿ ತಮಿಳು ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿದರು ಎಂದು ವರದಿಗಳು ಹೇಳಿವೆ.

ಆದರೆ ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ ಹಾಸನ್‌, “ನಮ್ಮದು ಔಪಚಾರಿಕ ಸೌಹಾರ್ದದ ಭೇಟಿಯಾಗಿತ್ತು; ನಾವು ತಮಿಳು ನಾಡಿನ ರಾಜಕಾರಣದ ಬಗ್ಗೆ ಮಾತನಾಡಿಕೊಂಡೆವು’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next