Advertisement

“ಹಸಿರು ಕ್ರಾಂತಿ” ಸಂಪಾದಕ ಕಲ್ಯಾಣರಾವ್ ನಿಧನಕ್ಕೆ ಸಿ ಎಂ ಬೊಮ್ಮಾಯಿ ಸಂತಾಪ

07:09 PM Oct 06, 2021 | Team Udayavani |

ಬೆಂಗಳೂರು: ಬೆಳಗಾವಿಯ ಪ್ರಮುಖ ದಿನಪತ್ರಿಕೆ  ಹಸಿರು ಕ್ರಾಂತಿಯ ಸಂಸ್ಥಾಪಕ‌ ಸಂಪಾದಕರಾದ ಕಲ್ಯಾಣರಾವ್ ಮುಚಳಂಬಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಹಸಿರು ಕ್ರಾಂತಿ ಉತ್ತರ ಕರ್ನಾಟಕ ಭಾಗದ ಪ್ರಮುಖ ಪತ್ರಿಕೆ. ಈ ಪತ್ರಿಕೆ  ರೈತರ ಜೀವನಾಡಿಯಾಗಿತ್ತು. ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸವನ್ನು ಹಸಿರು ಕ್ರಾಂತಿ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಈ ಪತ್ರಿಕೆಯನ್ನು ಕಟ್ಟಿಬೆಳೆಸಿದ ಕಲ್ಯಾಣರಾವ್ ಮುಚಳಂಬಿ ಅವರು ಇಂದು ನಿಧನರಾಗಿರುವುದು ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು ಎಂದು ಸಿಎಂ ಬಸವರಾಜ ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next