Advertisement

ಕಲ್ಲಬೆಟ್ಟು: ಬ್ಯಾಂಕ್‌ ಸಾಲಗಾರನಿಂದ ಉಪವಾಸ ಸತ್ಯಾಗ್ರಹ

01:02 AM Jul 25, 2019 | Sriram |

ಮೂಡುಬಿದಿರೆ: ಸಹಕಾರಿ ಬ್ಯಾಂಕ್‌ನಿಂದ ತಾನು ಪಡೆದ ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ತೋರಿಸಿ, ಅಡವಿಟ್ಟಿದ್ದ ನನ್ನ ಆಸ್ತಿಯನ್ನು ಏಲಂ ಮಾಡಿರುವುದಾಗಿ ಆರೋಪಿಸಿ ಸಾಲಗಾರ ಶಿರ್ತಾಡಿ ನಿವಾಸಿ ರವಿರಾಜ್‌ ಹೆಗ್ಡೆ ಅವರು ಕಲ್ಲಬೆಟ್ಟು ಸಹಕಾರಿ ಬ್ಯಾಂಕ್‌ ಎದುರು ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

Advertisement

ಐದು ವರ್ಷಗಳ ಹಿಂದೆ ಅವರು ಕಲ್ಲಬೆಟ್ಟು ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದಿದ್ದು, ಅದನ್ನು ಮರುಪಾವತಿಸದೆ ಇರುವುದರಿಂದ ಬ್ಯಾಂಕ್‌ ಸಹಕಾರಿ ಉಪನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಿ, ಅಡವಿಟ್ಟಿದ್ದ ಆಸ್ತಿಯನ್ನು ಏಲಂ ನಡೆ ಸಲು ಪ್ರಕ್ರಿಯೆ ಆರಂಭಿ ಸಿ ತ್ತು. ಬುಧವಾರ ರವಿರಾಜ್‌ ಹೆಗ್ಡೆ ಅವರು ತನಗೆ ಅನ್ಯಾಯವಾಗಿದೆ ಎಂದು ಬ್ಯಾಂಕ್‌ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಸ್ಥಳದಲ್ಲಿ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಧ್ಯಕ್ಷರ ಹೇಳಿಕೆ
ಈ ಬಗ್ಗೆ ಬ್ಯಾಂಕ್‌ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಹೇಳಿಕೆ ನೀಡಿದ್ದು “ರವಿರಾಜ್‌ ಅವರು ಸೂಕ್ತ ದಾಖಲೆಯನ್ನಿಟ್ಟು ಸಾಲ ಪಡೆದಿದ್ದು ಮರುಪಾವತಿಸದೆ ಇರುವುದರಿಂದ ಬ್ಯಾಂಕ್‌ ಕಾನೂನು ಕ್ರಮ ಕೈಗೊಂಡಿದೆ. ಬ್ಯಾಂಕ್‌ ಅವರಿಗೆ ಅನ್ಯಾಯವೆಸಗಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next