Advertisement

ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡಿ ಕಾಳಿ ಚರಣ್‌ ಮಹಾರಾಜ್

06:32 PM Oct 19, 2020 | sudhir |

ಮೂಡುಬಿದಿರೆ : ಮಂಗಳಾದೇವಿಯ ಪುಣ್ಯಕ್ಷೇತ್ರ ಮಂಗಳೂರಿನಲ್ಲಿ ಕಾಳಿಯ ಮಂದಿರ ನಿರ್ಮಿಸಿ, ದೇವಿಯ ಬೃಹತ್‌ ವಿಗ್ರಹ ಪ್ರತಿಷ್ಠಾಪಿಸುವ ಉದ್ದೇಶದೊಂದಿಗೆ ಕರಾವಳಿಯ ಪುಣ್ಯಕ್ಷೇತ್ರಗಳ ದರ್ಶನ ಪಡೆಯುತ್ತಿರುವುದಾಗಿ ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್‌ ಮಹಾರಾಜ್‌ ಸ್ವಾಮೀಜಿ ತಿಳಿಸಿದರು.

Advertisement

ರವಿವಾರ ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡಿ, ಚಂದ್ರನಾಥ ಸ್ವಾಮಿ, ಕ್ಷೇತ್ರಪಾಲ, ನಾಗಲಯದ ದರ್ಶನ ಪಡೆದ ಅವರು ಬಸದಿಯ ವಾಸ್ತು ಶಿಲ್ಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, “ಬಸದಿಯ ವಾಸ್ತುಶಿಲ್ಪವನ್ನು ವರ್ಣಿಸಲು ಅಸಾಧ್ಯ; ಇಲ್ಲಿನ ಕೆತ್ತನೆಗಳ ವೀಕ್ಷಣೆಯೇ ಅದ್ಭುತ ಅನುಭವ ನೀಡಿದೆ’ ಎಂದರು.

ಪುರಸಭೆ ಸದಸ್ಯ ಪ್ರಸಾದ್‌ ಕುಮಾರ್‌, ಜವನೆರ್‌ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್‌ ಕೋಟೆ, ಉದ್ಯಮಿ ಪ್ರತೀಕ್‌ ಶೆಟ್ಟಿ ಎಕ್ಕಾರು, ಅಭಿಲಾಷ್‌, ಕಿಶೋರ್‌, ರಂಜಿತ್‌ ಪೂಜಾರಿ, ಹರೀಶ್‌ ಎಂ.ಕೆ, ನಾಗವರ್ಮ ಜೈನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next