Advertisement

ಏ.12ರಂದು ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಕನ್ನಡ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ್

05:23 PM Apr 10, 2021 | Team Udayavani |

ಮಣಿಪಾಲ: ಕನ್ನಡ ಗಾನ ಕೋಗಿಲೆ ರಿಯಾಲಿಟಿ ಶೋನಲ್ಲಿ ತನ್ನ ಅದ್ಭುತ ಕಂಠಸಿರಿಯ ಜನಪದ ಹಾಡಿನ ಮೂಲಕ ಜನಪ್ರಿಯರಾಗಿದ್ದ ಉಡುಪಿಯ ಕಲಾವತಿ ದಯಾನಂದ್ ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಮನೆ ಬಾ ಅತಿಥಿ ಎಂಬ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಸೋಮವಾರ(ಏಪ್ರಿಲ್ 12) ಪಾಲ್ಗೊಳ್ಳಲಿದ್ದಾರೆ.

Advertisement

ಕಲಾವತಿ ದಯಾನಂದ ಅವರ ಜತೆ ಸೋಮವಾರ ಸಂಜೆ 5.30ಕ್ಕೆ ಫೇಸ್ ಬುಕ್ ಲೈವ್ ನಲ್ಲಿ ಮಾತುಕತೆ ನಡೆಸಲಿದ್ದು, ಈ ಸಂದರ್ಭದಲ್ಲಿ ಓದುಗರು, ಅಭಿಮಾನಿಗಳು ತಮ್ಮ ಪ್ರಶ್ನೆಗಳನ್ನು ಲೈವ್ ಚಾಟ್ ಮೂಲಕ ಕೇಳಿ ಉತ್ತರ ಪಡೆಯಬಹುದಾಗಿದೆ.

ಅಭಿನಯಿಸುತ್ತಲೇ ಹಾಡುವುದು ಕಲಾವತಿ ಪುತ್ರನ್ ಅವರ ವಿಶಿಷ್ಟ ಕಲಾಶೈಲಿಯಾಗಿದೆ. ಉಷಾ ಉತ್ತಪ್ಪ ಅವರ ಹಾಡುಗಳನ್ನು ಜನಪ್ರಿಯಗೊಳಿಸಿರುವ ಇವರು, ಅಶ್ವತ್ಥ್ ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. ಹಾಡುವುದು ಕಲಾವತಿಯವರಿಗೆ ಚಿಕ್ಕಂದಿನಿಂದಲೂ ಸಿದ್ದಿಸಿದ ಕಲೆಯಾಗಿದೆ.

ಕಂಚಿನ ಕಂಠದ ಗಾಯಕಿ, ಗಾನಕೋಗಿಲೆ ಎಂದು ಬಿರುದು ಪಡೆದಿರುವ ಕಲಾವತಿ ದಯಾನಂದ್ ಅಪ್ಪಟ ಜನಪದ ಶೈಲಿಯಲ್ಲಿ ಹಾಡುವ ಮೂಲಕ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದು ಇವರ ಹೆಗ್ಗಳಿಕೆ. ಸಿ.ಅಶ್ವತ್ಥ್ ಅವರ ಕೋಳಿಗೆ ರಂಗ ಹಾಡು ಕಲಾವತಿಯವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

Advertisement

ಉಡುಪಿಯ ಕರಾವಳಿಯ ಸಾಮಾನ್ಯ ಮೀನುಗಾರರ ಕುಟುಂಬದಲ್ಲಿ ಜನಿಸಿದ್ದ ಕಲಾವತಿಯವರಿಗೆ ಚಿಕ್ಕಂದಿನಿಂದಲೂ ಹಾಡುವ ಅಭ್ಯಾಸ ಬೆಳೆಸಿಕೊಂಡಿದ್ದ ಇವರು ಇಂದು ಜಾನಪದ, ಸುಗಮ ಸಂಗೀತ ಸೇರಿದಂತೆ ಹಲವಾರು ಗೀತೆಗಳ ಮೂಲಕ ಕಡಲತಡಿಯಿಂದ ಹಿಡಿದು ವಿದೇಶದವರೆಗೂ ತಮ್ಮ ಕಂಠಸಿರಿಯ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next