Advertisement

ಕಾಳಾವರ: ಕೊರಗ ಸಮುದಾಯದ ಸಮಸ್ಯೆಗಳ ಸಂವಾದ

01:00 AM Mar 08, 2019 | Team Udayavani |

ತೆಕ್ಕಟ್ಟೆ: ಕಾಳಾವರ ಗ್ರಾ.ಪಂ. ವ್ಯಾಪ್ತಿಯ ಕೊರಗ ಸಮುದಾಯದ ಕುಟುಂಬಗಳ ವಿವರ ಹಾಗೂ ಸಮಸ್ಯೆಗಳ ಬಗ್ಗೆ ಸಂವಾದ ಕಾರ್ಯಕ್ರಮವು ಕಾಳಾವರ ಗ್ರಾ.ಪಂ. ಅಧ್ಯಕ್ಷ ರಘುರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಾ. 7ರಂದು ನಡೆಯಿತು.

Advertisement

ಗ್ರಾ.ಪಂ. ಉಪಾಧ್ಯಕ್ಷೆ ಸುಜಾಜಚ ಶೆಟ್ಟಿ, ಐಟಿಡಿಪಿ ಅಧಿಕಾರಿ ವಿಶ್ವನಾಥ ಶೆಟ್ಟಿ, ಮಣಿಪಾಲ ಪ್ರಸನ್ನ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಎಂಎಸ್‌ಡಬ್ಲೂé ವಿಭಾಗದ ಪ್ರೊ| ಪೂರ್ಣಿಮಾ ವೆಂಕಟೇಶ್‌, ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್‌ ವಿ., ಕೊರಗ ಮುಖಂಡ ಗಣೇಶ್‌ ಬಾರಕೂರು, ಕಾರ್ಯಕರ್ತೆ ವಿನುತಾ, ರಾಜೇಶ್‌, ಪಿಡಿಒ ಮಧು, ಗ್ರಾ.ಪಂ. ಸದಸ್ಯರು, ಕೊರಗ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.
ಎಂಎಸ್‌ಡಬ್ಲೂ Â ವಿದ್ಯಾರ್ಥಿಗಳು ತಮ್ಮ ಸರ್ವೇ ಮೂಲಕ ಸಂಗ್ರಹಿಸಿದ ಮಾಹಿತಿ ಮತ್ತು ಐಟಿಡಿಪಿ ಇಲಾಖೆಯ ಹಾಗೂ ಗ್ರಾ.ಪಂ.ನಲ್ಲಿರುವ ಮಾಹಿತಿ ಕ್ರೋಢಿಕರಿಸಿ, ಪ್ರಸ್ತುತ ಇರುವ ಕುಟುಂಬಗಳ ವಿವರವನ್ನು ನಿರ್ಧರಿಸಲಾಯಿತು. ವಿದ್ಯಾರ್ಥಿಗಳಾದ ಸ್ಫೂರ್ತಿ ಸ್ವಾಗತಿಸಿ, ನಿರೂಪಿಸಿದರು. ಸುಮೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next