Advertisement

ಕಳತ್ತೂರು : ವೃತ್ತಿ ಕಲಾ ಶಿಕ್ಷಕರಿಗೆ ಸಮ್ಮಾನ, ಬೀಳ್ಕೊಡುಗೆ

01:08 PM Jul 05, 2018 | Team Udayavani |

ಕಾಪು: ಕಳತ್ತೂರು ಪಿ.ಕೆ.ಎಸ್‌. ಪ್ರೌಢಶಾಲೆಯಲ್ಲಿ  ಕಲಾ ಶಿಕ್ಷಕರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ವೇಣುಗೋಪಾಲ್‌ ಅವರನ್ನು ಸಮ್ಮಾನಿಸಿ, ಬೀಳ್ಕೊಡಲಾಯಿತು.

Advertisement

ಉದ್ಯಮಿ ಶೋಧನ್‌ ಕುಮಾರ್‌ ಶೆಟ್ಟಿ ಬೆಳ್ಮಣ್‌, ಕಳತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಿತ್ಯಾನಂದ ಆರ್‌. ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್‌ ಕುಮಾರ್‌ ಗುರ್ಮೆ, ಶಾಲಾ ಸಂಚಾಲಕ ಶಿವರಾಮ ಶೆಟ್ಟಿ  ಪೈಯ್ನಾರು, ಕೋಶಾಧಿಕಾರಿ ಅರುಣಾಕರ ಡಿ. ಶೆಟ್ಟಿ, ಸದಸ್ಯರಾದ ವೇಣುಗೋಪಾಲ ಎಂ., ಲವ ಶೆಟ್ಟಿ, ಕಾಂಪರ ಟೈಲರ್‌, ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್‌ ಕೆ. ಎಂ.,ಶಾಲಾ ನಾಯಕಿ ರಕ್ಷಿತಾ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ವೇಣುಗೋಪಾಲ್‌- ಪ್ರೇಮಾ ದಂಪತಿಯನ್ನು  ಶಾಲಾ ಆಡಳಿತ ಮಂಡಳಿ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳ ವತಿಯಿಂದ ಸಮ್ಮಾನಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ  ಸ್ವಾಗತಿಸಿದರು. ಆಂಗ್ಲ ಭಾಷಾ ಶಿಕ್ಷಕಿ ರೂಪಾ ಸಮ್ಮಾನ ಪತ್ರ ವಾಚಿಸಿದರು. ಕನ್ನಡ ಅಧ್ಯಾಪಕ ಚಂದ್ರಕಾಂತ ಮಣಿ ನಾಯಕ್‌ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next