Advertisement

ಗಣರಾಜ್ಯೋತ್ಸವ: ಅಂಬೇಡ್ಕರ್ ಭಾವಚಿತ್ರ ಇಲ್ಲದಿರುವುದಕ್ಕೆ ವಕೀಲರ ಆಕ್ರೋಶ

10:10 AM Jan 27, 2020 | keerthan |

ಕಲಬುರಗಿ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಲ್ಲದಿರುವುದಕ್ಕೆ ಖಂಡಿಸಿದ ವಕೀಲರು, ಸ್ವತಃ ತಾವೇ ಅಂಬೇಡ್ಕರ್ ಭಾವಚಿತ್ರ ಇಡಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

Advertisement

ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಅಚರಣೆಯಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರ ಮಾತ್ರ ಇತ್ತು. ಇದನ್ನು ಖಂಡಿಸಿದ ಕೆಲ ವಕೀಲರು ಅಂಬೇಡ್ಕರ್ ಭಾವಚಿತ್ರ ಇಡಲು ಯತ್ನಿಸಿದರು. ಆದರೆ,  ಪೊಲೀಸರು ಅವಕಾಶ ನೀಡದೆ ಇರುವುದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಧ್ವಜಾರೋಹಣ ಸಮಯದಲ್ಲಿ ಹನುಮಂತ ಯಳಸಂಗಿ ನೇತೃತ್ವದಲ್ಲಿ ಭಾವಚಿತ್ರ ಎತ್ತಿ ಹಿಡಿದರು. ‌ಪೊಲೀಸರ ಕ್ರಮಕ್ಕೆ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next