Advertisement

ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮಹಿಳೆ ಸ್ಥಳದಲ್ಲೇ ಸಾವು

06:03 PM Apr 27, 2022 | Team Udayavani |

ಕಲಬುರಗಿ : ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಗಡಿಪ್ರದೇಶದ ಶಿವರೆಡ್ಡಿ ಪಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಸಿಡಿಲು ಮತ್ತು ಗುಡುಗಿನ ಆರ್ಭಟದೊಂದಿಗೆ ಮಳೆ ಸುರಿದ ಪರಿಣಾಮವಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಶಿವರೆಡ್ಡಿಪಳ್ಳಿ ಗ್ರಾಮದ ನಾಗಮಣಿ ರಾಜು ಜೊಗು (೩೦) ಮೃತಪಟ್ಟ ಮಹಿಳೆಯಾಗಿದ್ದಾರೆ.

ಕುಂಚಾವರಂ ಸುತ್ತಮುತ್ತಲಿನ ಶಿವರೆಡ್ಡಿಪಳ್ಳಿ ಲಚಮಾಸಾಗರ ಶಿವರಾಂಪುರ ಬೋನಸ್ ಪುರ್ ಪೋಚಾವರಂ ಮುಂತಾದ ಕಡೆ ಬುಧವಾರ ೪ಗಂಟೆಗೆ ಗುಡುಗು ಮಿಂಚು ಸಿಡಿಲಿನ ಆರ್ಭಟದಿಂದ ಅಕಾಲಿಕ ಮಳೆಯಾದ ಪರಿಣಾಮವಾಗಿ ಹೊಲದಲ್ಲಿ ಕೆಲಸ ನಿರತರಾದ ಮಹಿಳೆ ಮೇಲೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕುಂಚಾವರಂ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಉದ್ದಂಡಪ್ಪ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆ ಶವ ಪರೀಕ್ಷೆಗಾಗಿ ತಂದಿಡಲಾಗಿದೆ ಎಂದು ಕುಂಚಾವರಂ ಗ್ರಾಮಸ್ಥ ವೆಂಕಟೇಶ್ ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ರಥೋತ್ಸವ ವೇಳೆ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ 11 ಮಂದಿ ದಾರುಣ ಸಾವು

 

Advertisement

Udayavani is now on Telegram. Click here to join our channel and stay updated with the latest news.

Next