Advertisement
ನಗರ ಹೊರವಲಯದ ಗೀತಾ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ, ಅಮೃತ ಸರೋವರ ರಿಟ್ರೀಟ್ ಸೆಂಟರ್ ಹಾಗೂ ಸಭಾಂಗಣವನ್ನು ರವಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
Related Articles
Advertisement
ವಿಶ್ವದಲ್ಲಿಯೇ ಸ್ಥಿರ ಮನಸ್ಸಿನ ಮಹಿಳೆ ಎನ್ನುವ ಖ್ಯಾತಿ ದಾದಿ ಜಾನಕಿ ಅವರದ್ದಾಗಿದೆ. ಮಹಿಳೆಯರ ಗೌರವ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸೋದರ ಭಾವನೆಯಿಂದ ಸಮಾಜ ಸುಧಾರಣೆ ಎನ್ನುವುದರಲ್ಲಿ ದಾದಿ ಜಾನಕಿ ನಂಬಿಕೆ ಇಟ್ಟಿದ್ದಾರೆ ಎಂದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ದಾದಿ ಜಾನಕಿ ಅವರು ಕಲಬುರಗಿ ಜನತೆಗೆ ಆಶೀರ್ವಾದ ಮಾಡಲು ಅಷ್ಟೇ ಬಂದಿಲ್ಲ. ಇಲ್ಲಿನ ಜನರ ನೀರು ಮತ್ತು ಜ್ಞಾನ ದಾಹ ನೀಗಿಸಲು ಬಂದಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದಂತೆ ಶನಿವಾರ ಮಳೆ ಸುರಿಯಿತು ಎಂದು ಬಣ್ಣಿಸಿದರು.
ಅಮೃತ ಸರೋವರ ಸಭಾಂಗಣ ಅದ್ಭುತವಾಗಿದೆ. ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಸಿಗುವ ಭಕ್ತಿ ಮತ್ತು ಶ್ರದ್ಧೆಯನ್ನು ಕಲಬುರಗಿಯಲ್ಲೇ ಪಡೆಯಬಹುದಾಗಿದೆ ಎಂದು ಹೇಳಿದರು.
ಕಲಬುರಗಿ ವಲಯದ ಮುಖ್ಯಸ್ಥೆ ರಾಜಯೋಗಿನಿ ವಿಜಯಾ ಬೆಹನ್ ಸ್ವಾಗತಿಸಿದರು. ರಾಷ್ಟ್ರೀಯ ಸಂಚಾಲಕ ಪ್ರೇಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರಿನ ಲಕ್ಷ್ಮೀ ಬೆಹನ್, ಬೆಂಗಳೂರಿನ ಸರೋಜಾ ಬೆಹನ್, ನಿರ್ಮಲಾ ಬೆಹನ್, ಅಂಬಿಕಾ ಬೆಹನ್, ಪದ್ಮಾ ಬೆಹನ್, ಹಂಸಾ ಬೆಹನ್, ಮಹಾದೇವಿ ಬೆಹನ್, ರಾಗಿಣಿ ಬೆಹನ್, ಬಿ.ಕೆ. ಬಸವರಾಜ, ಕುಲದೀಪ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಬಂದಿದ್ದ ಭಕ್ತಾದಿಗಳು ಭಾಗವಹಿಸಿದ್ದರು.