Advertisement

ಡಿಸಿಎಂ ಜತೆ ಅನುಚಿತ ವರ್ತನೆ ಖಂಡನೀಯ

06:39 PM May 07, 2020 | Naveen |

ಕಲಬುರಗಿ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಮಸ್ಯೆಗಳನ್ನು ಆಲಿಸಲೆಂದು ನಗರದ ಸಾತ್‌ಗುಂಬಜ್‌ ವೃತ್ತದ ಬಳಿಯ ಕಂಟೈನ್ಮೆಂಟ್‌ ಝೋನ್‌ಗೆ ತೆರಳಿದ ಸಂದರ್ಭದಲ್ಲಿ ಅಲ್ಲಿ ಕೆಲವೊಬ್ಬರು ಅನುಚಿತವಾಗಿ ವರ್ತಿಸಿದ್ದು ಶೋಭೆ ತರುವಂತದ್ದಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ತಿಳಿಸಿದ್ದಾರೆ.

Advertisement

ಕೋವಿಡ್ ನಿಂದ ದೇಶವಲ್ಲದೇ ಇಡೀ ವಿಶ್ವವೇ ಸಂಕಷ್ಟದಲ್ಲಿದೆ. ಪ್ರತಿಯೊಬ್ಬರು ತೊಂದರೆ ಸ್ಥಿತಿಯಲ್ಲಿದ್ದಾರೆ. ಉಪ ಮುಖ್ಯಮಂತ್ರಿಗಳು ಈ ಕುರಿತು ಮೂರು ಸಭೆ ನಡೆಸಿದ್ದಲ್ಲದೇ, ದಿನಾಲು ಆಗು-ಹೋಗುಗಳ ಕುರಿತಾಗಿ ಸಮಾಲೋಚಿಸಿ, ಅಗತ್ಯ ಸಲಹೆ-ಸೂಚನೆ ನೀಡುತ್ತಲೇ ಇದ್ದಾರೆ. ಅಂತಹದ್ದರಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿರುವುದು ಸರಿಯಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next