Advertisement

Kalaburagi; ಸಾಗನೂರು ಗಿರೀಶ್ ಕೊಲೆ ಪ್ರಕರಣ: ಬಾಲಕ ಸೇರಿ ನಾಲ್ವರ ಬಂಧನ

05:55 PM Mar 04, 2024 | Team Udayavani |

ಕಲಬುರಗಿ: ಬಿಜೆಪಿ ಯುವ ಮುಖಂಡ ಗಿರೀಶ್ ಬಸಣ್ಣ ಚಕ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷ ಕೊಳಪಡುವ ಬಾಲಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತರಲ್ಲಿ ಮಾಶಾಳ ಗ್ರಾಮದ ಸಚಿನ್, ಪ್ರಜ್ವಲ್ ಭಜಂತ್ರು, ವಿಶ್ವನಾಥ ಅಲಿಯಾಸ್ ಕುಮಾರ ಹಾಗೂ ಇನ್ನೊಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಎಂದು ಗುರುತಿಸಲಾಗಿದೆ.

ಗಿರೀಶ್ ಕೊಲೆ ಪ್ರಕರಣವನ್ನು ಭೇದಿಸಲು ಎಸ್ಪಿ ಅಕ್ಷಯ್ ಹಾಕೆ ಅವರು ಡಿವೈಎಸ್ಪಿ ನೇತೃತ್ವದ ತಂಡವನ್ನು ರಚನೆ ಮಾಡಿದ್ದರು. ಈ ತಂಡ ಕಳೆದ ಎರಡು ದಿನಗಳ ಕಾಲ ಸಹತವಾಗಿ ತನಿಖೆ ಮಾಡಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next