Advertisement

Kalaburagi;ಅಕ್ರಮ ಮರಳುಗಾರಿಕೆ ಪ್ರಕರಣ: ಸಿಪಿಐ, ಪಿಎಸ್ಐ, ಪೇದೆ ಅಮಾನತು

08:59 PM Jun 17, 2023 | Team Udayavani |

ಕಲಬುರಗಿ: ಜೇವರ್ಗಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳಗಾರಿಕೆ ಸಂಬಂಧ ನಿರ್ಲಕ್ಷ್ಯ ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಮೊದಲ ಕ್ರಮವಾಗಿದೆ. ಈ ಘಟನೆಯ ಹಿಂದೆ ಇರುವ ವರು ಯಾರೇ ಆಗಿರಲಿ, ಎಷ್ಟೇ ಬಲಾಢ್ಯವಾಗಿರಲಿ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.ಶೀಘ್ರವೇ ಇಡೀ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯೂ ನಡೆಸಲಾಗುವುದು ಎಂದು ಶಾಸಕ ಡಾ. ಅಜಯ ಸಿಂಗ್ ಉದಯವಾಣಿಗೆ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಅಕ್ರಮ ಮರಳುಗಾರಿಕೆಗೆ ಪೇದೆ ಬಲಿ ಪ್ರಕರಣ: ಪ್ರಮುಖ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಜೇವರ್ಗಿ ತಾಲೂಕಿನ ಹುಲ್ಲೂರು ಕ್ರಾಸ್ ಬಳಿಯಲ್ಲಿ ಗುರುವಾರ ಮರಳಿನ ಟ್ಯಾಕ್ಟರ್ ಹಾಯಿಸಿ ಪೇದೆ ಮಯೂರ್ ಬಲಿ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ ಸಿಪಿಐ, ನೇಲೋಗಿ ಪಿಎಸ್ಐ, ಎಸ್ಪಿ ಕರ್ತವ್ಯ ನಿರ್ವಹಿಸುವ ಪೇದೆಯೊಬರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಇಶಾಪಂತ್ ಹೇಳಿದ್ದಾರೆ.

ಮುಖ್ಯ ಪೇದೆ ಮಯೂರ್ ಬಲಿಯಾಗಿರುವ ಪ್ರಕರಣದಲ್ಲಿ ಜೇವರ್ಗಿ ಸಿಪಿಐ ಭೀಮನಗೌಡ ಬಿರಾದಾರ, ನೆಲೋಗಿ ಪಿಎಸ್ ಐ ಗೌತಮ್ ಹಾಗೂ ನೆಲೋಗಿ ಠಾಣೆಯಲ್ಲಿ ಎಸ್ಪಿ ಕರ್ತವ್ಯ ನಿರ್ವಹಿಸುವ ಪೇದೆ ರಾಜಶೇಖರ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next