Advertisement

ಇನ್ನೂ ಪರಿಹಾರ ನೀಡಿ: ಅಜಯಸಿಂಗ್‌

04:31 PM May 07, 2020 | Naveen |

ಕಲಬುರಗಿ: ಕೋವಿಡ್ ನಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಇನ್ನಷ್ಟು ನಿಟ್ಟಿನಲ್ಲಿ ಪರಿಹಾರ ನೀಡುವುದು ಅಗತ್ಯವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್‌ ಆಗ್ರಹಿಸಿದರು.

Advertisement

ಆನೇಕಲ್‌ ವಿಧಾನಸಭೆ ಕ್ಷೇತ್ರದ ವಿವಿಧ ತೋಟಗಾರಿಕಾ ಕ್ಷೇತ್ರಗಳಿಗೆ ತೆರಳಿ ಹಾನಿ ವೀಕ್ಷಿಸಿದ ನಂತರ ಮಾತನಾಡಿದ ಅವರು, ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ರೈತರು ತೀರಾ ಸಂಕಷ್ಟದಲ್ಲಿದ್ದಾರೆ ಸರಕಾರ ಹೆಚ್ಚಿನ ಪ್ರಮಾಣದ ಅನುದಾನ ಇನ್ನಷ್ಟು ನಿಟ್ಟಿನಲ್ಲಿ ಘೋಷಿಸಿ ರೈತರಿಗೆ ನೆರವು ಆಗುವಂತೆ ಒತ್ತಾಯಿಸಲಾಗುವುದು ಎಂದರು. ನಂತರ ಹೂವು ಹಾಗೂ ತರಕಾರಿ ತೋಟಗಳಿಗೆ ಭೇಟಿ ನೀಡಿ ಬೆಳೆಗಾರರ ಸಮಸ್ಯೆ ಆಲಿಸಿದರು. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ ಮತ್ತು ಆನೇಕಲ್‌ ಶಾಸಕ ಶಿವಣ್ಣ ಹಾಗೂ ಸ್ಥಳೀಯ ರೈತರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next