Advertisement

ಕ್ರಾಸ್‌ ಮೈದಾನ್‌ ನಲ್ಲಿ ಕಾಲಾಘೋಡ: ಅನುಮತಿ ನಿರಾಕರಣೆ

04:59 PM Feb 02, 2018 | udayavani editorial |

ಮುಂಬಯಿ : ಸಾರ್ವಜನಿಕ ಸ್ಥಳಗಳಲ್ಲಿ  ಕಾರ್ಯಕ್ರಮ ನಡೆಸವುದಕ್ಕೆ ಯಾವುದೇ ಶುಲ್ಕ ಮತ್ತು ಶರತ್ತನ್ನು ವಿಧಿಸದೆ ಉಚಿತವಾಗಿ ಅವುಗಳನ್ನು ನೀಡುತ್ತಿರುವ ಮಹಾರಾಷ್ಟ್ರ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈಕೋರ್ಟ್‌ ಇದೇ ಫೆ.5ರಂದು ಕ್ರಾಸ್‌ ಮೈದಾನ್‌ ನಲ್ಲಿ ಕಾಲಾ ಘೋಡಾ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅನುಮತಿ ನಿರಾಕರಿಸಿದೆ. 

Advertisement

ನಾಳೆ ಶನಿವಾರದಿಂದ ಆರಂಭವಾಗುವ ಕಾಲಾ ಘೋಡಾ ಉತ್ಸವದ ಅಂಗವಾಗಿ ತಬ್ಲಾ ಮಾಂತ್ರಿಕ ಝಾಕೀರ್‌ ಹುಸೇನ್‌ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 

ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕ್ರಾಸ್‌ ಮೈದಾನ್‌ಗೆ ವರ್ಗಾಯಿಸಲಾಗುತ್ತದೆ. ದಕ್ಷಿಣ ಮುಂಬಯಿಯ ಕಾಲಾಘೋಡ ಪ್ರದೇಶ ನಿಶಬ್ದ ವಲಯವೆಂದು ಘೋಷಿಸಲ್ಪಟ್ಟಿರುವುದೇ ಇದಕ್ಕೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next