Advertisement

Kaikamba: ನದಿಗೆ ಹಾರಿದ ವ್ಯಕ್ತಿ ನಾಪತ್ತೆ

12:51 AM Nov 22, 2023 | Team Udayavani |

ಕೈಕಂಬ: ಅಡ್ಡೂರು ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಶೂ ಲೇಸ್‌ ನೀರಿನಲ್ಲಿ ಹೋಯಿತೆಂದು ಅದನ್ನು ತರುವುದಾಗಿ ನದಿಗೆ ಹಾರಿದ ವ್ಯಕ್ತಿ ನಾಪತ್ತೆಯಾದ ಬಗ್ಗೆ ಆತನ ಜತೆ ಬಂದ ಯುವಕ ಹೇಳಿದ್ದಾನೆ. ಅದರೆ ಬಜಪೆ ಠಾಣೆಯಲ್ಲಿ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎನ್ನಲಾಗಿದೆ.

Advertisement

ಕಾವೂರು ಆಕಾಶಭವನದ ನಿವಾಸಿ ಪ್ರಶಾಂತ್‌ ಕುಮಾರ್‌ ನಾಪತ್ತೆಯಾದವರು ಎನ್ನಲಾಗಿದೆ. ಅವರು ಗೆಳಯನ ಜತೆ ಪೊಳಲಿ ದೇವಸ್ಥಾನಕ್ಕೆ ಬಂದಿದ್ದು ದೇವಸ್ಥಾನಕ್ಕೆ ತೆರಳುವ ಮುನ್ನ ನದಿಯಲ್ಲಿ ಸ್ನಾನ ಮಾಡುವ ವೇಳೆ ಈ ಘಟನೆ ಸಂಭವಿಸಿದೆ.

ಘಟನೆ ತಿಳಿದು ಅಗ್ನಿಶಾಮಕ ದಳದ ಸಿಬಂದಿ ನದಿಯಲ್ಲಿ ಹಾರಿದ ವ್ಯಕ್ತಿಯನ್ನು ಹುಡುಕಿದರೂ ಪತ್ತೆಯಾಗಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next