Advertisement

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ ಕಾಗೋಡು ತಿಮ್ಮಪ್ಪ

07:54 AM Jul 07, 2019 | Lakshmi GovindaRaj |

ಶಿವಮೊಗ್ಗ: ರಕ್ತದೊತ್ತಡದಲ್ಲಿನ ಏರುಪೇರು ಹಾಗೂ ಉಸಿರಾಟದ ತೊಂದರೆಯಿಂದ ಗುರುವಾರ ರಾತ್ರಿ ಅಸ್ವಸ್ಥರಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ ವಿಶ್ರಾಂತಿ ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವುದರಿಂದ ಅವರನ್ನು ಶನಿವಾರ ಬೆಳಗ್ಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

Advertisement

ಮಗಳು ರಾಜನಂದಿನಿ ಅವರ ಜೊತೆಗೆ ಕಾಗೋಡು ತಿಮ್ಮಪ್ಪ ಅವರು ಬೆಂಗಳೂರಿಗೆ ತೆರಳಿದರು. ಗುರುವಾರ ರಾತ್ರಿ ಅಸ್ವಸ್ಥರಾಗಿದ್ದ ಕಾಗೋಡು ಅವರಿಗೆ ಸಾಗರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಶುಕ್ರವಾರ ಕಾಗೋಡು ಅವರನ್ನು ಐಸಿಯುನಿಂದ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಶನಿವಾರ ಅವರ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆಯಾಗಿದೆ.

ಜಿಪಂ ಸದಸ್ಯ ಕಲಗೋಡು ರತ್ನಾಕರ್‌ ಮತ್ತು ಕುಟುಂಬದವರ ನೆರವಿನೊಂದಿಗೆ, ಕಾಗೋಡು ತಿಮ್ಮಪ್ಪ ಅವರು ವಾರ್ಡ್‌ನಿಂದ ರಸ್ತೆವರೆಗೂ ನಡೆದು ಬಂದರು. ಹೊರಗೆ ಸಿಕ್ಕ ಪರಿಚಿತರು, ಮಾಧ್ಯಮದವರಿಗೆ “ಆರಾಮಿದ್ದಿರೇನೋ ಹುಡುಗ್ರಾ’ ಅಂತಾ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next