Advertisement

ಮಾಧುಸ್ವಾಮಿ- ಕಾಗಿನೆಲೆ ಶ್ರೀ ಪ್ರಕರಣ ಸುಖಾಂತ್ಯ; ಕಣ್ಣೀರು ಹಾಕಿದರಾ ಸಚಿವರು

09:41 AM Nov 22, 2019 | keerthan |

ದಾವಣಗೆರೆ: ಕಾನೂನು ಸಚಿವ ಮಾಧುಸ್ವಾಮಿ ಮತ್ತು ಕಾಗಿನೆಲೆ ಶಾಖಾ ಮಠದ ಶ್ರೀಗಳ ವಾಗ್ವಾದ ಪ್ರಕರಣ ಇದೀಗ ಸುಖಾಂತ್ಯ ಕಂಡಿದ್ದು, ಬಂದ್ ಹಿಂಪಡೆಯಲು ಶ್ರೀಗಳು ನಿರ್ಧಿಸಿದ್ದಾರೆ.

Advertisement

ಹರಿಹರ ತಾಲೂಕಿನ ಬೆಳ್ಳೂಡಿಯ ಕನಕಪೀಠದ ಶಾಖಾ ಮಠದಲ್ಲಿ ನಡೆದ ಸಂಧಾನ ಸಭೆಯಲ್ಲಿ ನಿರಂಜನಾನಂದಪುರಿ ಶ್ರೀಗಳು, ಮಾಧುಸ್ವಾಮಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಯಿ ಭಾಗವಹಿಸಿ, ಪ್ರಕರಣವನ್ನು ಸುಖಾಂತ್ಯ ಮಾಡಿದರು.

ನಮಗೂ ಸಾಕಷ್ಟು ಕೋಪಗಳಿದ್ದವು. ಆದರೆ ಸಚಿವರ ಕಣ್ಣಂಚಿನಲ್ಲಿ ಕಣ್ಣೀರು ಇರುವುದನ್ನು ನೋಡಿದ್ದೇವೆ. ನಾಮಫಲಕಕ್ಕೆ ಯಾವುದೇ ಅಡ್ಡಿ ಮಾಡಬೇಡಿ ಎಂದು ಮಾತುಕತೆ ನಡೆಸುತ್ತಿರುವ ವೇಳೆ ಪೊಲೀಸರಿಗೂ ಕೂಡ ಹೇಳಿದ್ದಾರೆ ಎಂದು ನಿರಂಜನಾನಂದಪುರಿ ಶ್ರೀಗಳು ಹೇಳಿದರು.

ನಾನು ಯಾವತ್ತು ಆ ವೃತ್ತಕ್ಕೆ ಹೆಸರು ಇಡುವುದನ್ನು ವಿರೋಧ ಮಾಡಿಲ್ಲ.  ನಾನು ಸ್ವಾಮಿಗಳಿಗೆ ಒಂದು‌ ಕೆಟ್ಟ ಪದ ಬಳಸಿಲ್ಲ. ಸಭೆಯಲ್ಲಿ ಗೊಂದಲವಾದಾಗ ಏರು ದ್ವನಿಯಲ್ಲಿ ಮಾತನಾಡಿದೆ. ನನಗೂ‌ ಮಾತನಾಡಲು ಬಿಡಿ ಎಂದು ಹೇಳಿದೆ ಅಷ್ಟೇ ನಾನು ಯಾವುದೇ ಸಮುದಾಯಕ್ಕೆ ನೋವು ಮಾಡಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next