Advertisement

ಪೊಲೀಸ್‌ ಆಯುಕ್ತರಿಂದ ಕದ್ರಿ ಟ್ರಾಫಿಕ್‌ ಸರ್ಕಲ್‌ ಉದ್ಘಾಟನೆ

12:04 PM Sep 09, 2018 | |

ಕದ್ರಿ : ಬಂಟ್ಸ್‌ ಹಾಸ್ಟೆಲ್‌ ರಸ್ತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಎಂ. ಶಾಂತಾರಾಮ್‌ ಶೆಟ್ಟಿ ಅವರಿಂದ ನಿರ್ಮಾಣಗೊಂಡ ಕದ್ರಿ ಟ್ರಾಫಿಕ್‌ ಸರ್ಕಲ್‌ ನ ಉದ್ಘಾಟನ ಸಮಾರಂಭ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಉದ್ಘಾಟಿಸಿದರು.

Advertisement

ಮೇಯರ್‌ ಭಾಸ್ಕರ್‌ ಕೆ., ಪಾಲಿಕೆ ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ, ಕಾರ್ಪೊರೇಟರ್‌ ಅಶೋಕ್‌ ಕುಮಾರ್‌ ಡಿ.ಕೆ. ವಿಪಕ್ಷದ ನಾಯಕ ಪ್ರೇಮಾನಂದ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರವೀಣ್‌ ಚಂದ್ರ ಆಳ್ವ ಮುಖ್ಯ ಅತಿಥಿಗಳಾಗಿದ್ದರು. 

ಸರ್ಕಲ್‌ನ ವಿನ್ಯಾಸಗಾರ ಯಶವಂತ ರೈ, ತೇಜಸ್ವಿನಿ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ದೇಶಕ ಡಾ| ಎಂ. ಅಜಿತ್‌ ಕುಮಾರ್‌, ವಸಂತಿ ಎಸ್‌. ಶೆಟ್ಟಿ, ಡಾ| ಲತಿಕಾ ಶೆಟ್ಟಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಈ ಸರ್ಕಲ್‌ನ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆಯನ್ನು ತೇಜಸ್ವಿನಿ ಆಸ್ಪತ್ರೆಯು ವಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next