Advertisement

ಕದಂಬೋತ್ಸವ: ನಿಗದಿತ ಸಮಯಕ್ಕಿಂತ ಮೊದಲೇ‌ ಆಗಮಿಸಲಿರುವ ಸಿಎಂ

04:48 PM Feb 26, 2023 | Team Udayavani |

ಶಿರಸಿ: ಐತಿಹಾಸಿಕ‌ ಪ್ರಸಿದ್ದ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವ ಉದ್ಘಾಟನೆಗೆ ನಿಗದಿಯಾದ ಸಮಯಕ್ಕಿಂತ ಮೊದಲೇ ಸಿಎಂ ಆಗಮಿಸಲಿದ್ದಾರೆ.

Advertisement

ಗುಡ್ನಾಪುರದಲ್ಲಿ ಭಾನುವಾರ ಕದಂಬ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್ , ಫೆ.28ರಂದು‌ ರಥ ಸಮರ್ಪಣೆ,‌ ನೀರಾವರಿ ಯೋಜನೆಗೆ ಚಾಲನೆ, ಕದಂಬೋತ್ಸವ ಉದ್ಘಾಟನೆಗೆ ಸಂಜೆ‌ 6 ಕ್ಕೆ ಬರಬೇಕಿದ್ದ ಸಿಎಂ‌ ನಿಗದಿತ ಸಮಯಕ್ಕಿಂತ‌ ಮೊದಲೇ ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಸಿಎಂ ಬನವಾಸಿಗೆ ಆಗಮಿಸಿ ನೀರಾವರಿ ಯೋಜನೆಗೆ ಚಾಲನೆ ನೀಡಿ, ದೇವರ ದರ್ಶನ ಮಾಡಿ, ರಥ ಸಮರ್ಪಿಸಿ ಕದಂಬೋತ್ಸಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಕದಂಬೋತ್ಸವ ಕನ್ನಡಿಗರ ಸ್ವಾಭಿಮಾನ, ನೆಲ, ಜಲ ಭಾಷೆಯ ಜಾಗೃತಿಯ ಉತ್ಸವ. ಜನರೆಲ್ಲ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದೂ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next